ಹನೂರು: ಪಟ್ಟಣದ ಮಹದೇಶ್ವರ ಕ್ರೀಡಾಂಗಣದಲ್ಲಿ ನಡೆದ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ರಾಮಾಪುರ ಜೆಎಸ್ಎಸ್ ಶಾಲೆ ವಿದ್ಯಾರ್ಥಿಗಳು ಹೆಚ್ಚಿನ ಬಹುಮಾನ ಪಡೆಯುವ ಮೂಲಕ ಗಮನ ಸೆಳೆದರು.
ಗುಂಡು ಎಸೆತ ಶರಣ್ ಪ್ರಥಮ, ಚಕ್ರ ಎಸೆತ ಕಾರ್ತಿಕ್ ಪ್ರಥಮ, ಶರಣ್ ದ್ವಿತೀಯ, ಪವಿತ್ರ ತೃತೀಯ, 400 ಮೀ ಓಟ ತ್ರಿಗುಣ ಪ್ರಥಮ, ಬಾಲಾಜಿ ದ್ವಿತೀಯ, ಪ್ರತೀಕ್ಷಾ ತೃತೀಯ, 600 ಮೀ ಓಟ ಕಿರಣ್ ದ್ವಿತೀಯ, ವಾಲಿಬಾಲ್ ಬಾಲಾಜಿ ತಂಡ ಪ್ರಥಮ, ಕಬಡ್ಡಿ ಬಾಲಕಿಯರ ತಂಡ ದ್ವಿತೀಯ, ಥ್ರೋ ಬಾಲ್ ತಂಡ ದ್ವಿತೀಯ, ಖೋ ಖೋ ದ್ವಿತೀಯ, ಕಬ್ಬಡಿ ಪ್ರಥಮ, ಎತ್ತರ ಜಿಗಿತ ಹಾಗೂ ಗುಂಡು ಎಸೆತ, ತಟ್ಟೆ ಎಸೆತದಲ್ಲಿ ಧನಲಕ್ಷ್ಮೀ ತೃತೀಯ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ.
ಶಾಲೆಯ ಮುಖ್ಯ ಶಿಕ್ಷಕ ಶ್ರೀ ಕಂಠ ಸೇರಿದಂತೆ ಶಾಲೆಯ ಶಿಕ್ಷಕರು ಮಕ್ಕಳಿಗೆ ಶುಭ ಕೊರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.