
ಚಾಮರಾಜನಗರ: ಮೈಸೂರಿನ ಸಾವರ್ಕರ್ ಪ್ರತಿಷ್ಠಾನದ ವತಿಯಿಂದ ಸಾವರ್ಕರ್ 60 ವರ್ಷದ ಪುಣ್ಯಸ್ಮರಣೆ ಸ್ಮರಣಾರ್ಥ ಪಂಜಿನ ಮೆರವಣಿಗೆ ನಡೆಯಿತು.
ನಗರದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಿಂದ ಪಂಜಿನ ಮೆರವಣಿಗೆ ಹೊರಟ ಕಾರ್ಯಕರ್ತರು ರಥಬೀದಿ, ದೊಡ್ಡಂಗಡಿ ಬೀದಿ, ಚಿಕ್ಕಂಗಡಿ ಬೀದಿ, ಅಗ್ರಹಾರ ಬೀದಿಯ ಮೂಲಕ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಸಮಾಪನಗೊಂಡಿತು.
ಪ್ರತಿಷ್ಠಾನದ ಸಹ ಕಾರ್ಯದರ್ಶಿ ಶಿವು ಚಿಕ್ಕಕಾನ್ಯ ಮಾತನಾಡಿದರು. ಮೆರವಣಿಗೆಯಲ್ಲಿ ಸಾರ್ವಕರ್ ಪ್ರತಿಷ್ಠಾನದ ಕಾರ್ಯದರ್ಶಿ ರಾಕೇಶ್ ಭಟ್, ಟ್ರಸ್ಟಿ ಅಶ್ವಿನ್, ಸಂತೋಷ್, ಮೋಹನ್, ಮುಖಂಡರಾದ ಕುಲಗಾಣ ಶಾಂತಮೂರ್ತಿ, ಶಿವರಾಜ್, ರಾಜೇಶ್, ಮಣಿ, ಬುಲೆಟ್ ಚಂದ್ರು, ರಮೇಶ್, ಬಂಗಾರ ನಾಯಕ, ರಾಜೇಶ್, ತ್ಯಾಗರಾಜು, ಪಾಪು, ಚಂದ್ರಶೇಖರ್, ಚಿಕ್ಕರಾಜು, ವೀರೇಂದ್ರ, ನಟರಾಜು, ಕೂಸಣ್ಣ ಇತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.