ಚಾಮರಾಜನಗರ: ಅನಾರೋಗ್ಯದ ಕಾರಣದಿಂದಾಗಿ ವಸತಿ, ಮೂಲಸೌಕರ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಬುಧವಾರ ವಿಜಯ ಸಂಕಲ್ಪ ಯಾತ್ರೆಯ ಉದ್ಘಾಟನಾ ಕಾರ್ಯಕ್ರಮಕ್ಕೆ ಬಂದಿಲ್ಲ ಎಂದು ಯಾತ್ರೆಯ ಮೊದಲ ತಂಡದ ಸಂಚಾಲಕ ಮತ್ತು ಶಾಸಕ ಕೆ.ಎಸ್.ಈಶ್ವರಪ್ಪ ಗುರುವಾರ ಸ್ಪಷ್ಟಪಡಿಸಿದರು.
ಯಡಿಯೂರಪ್ಪ ಹಾಗೂ ಸೋಮಣ್ಣ ನಡುವೆ ನಡೆಯುತ್ತಿರುವ ಮುಸುಕಿನ ಗುದ್ದಾಟದ ಕಾರಣಕ್ಕೆ ಸಚಿವರು ಬಂದಿಲ್ಲವೇ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, 'ಇಬ್ಬರ ನಡುವೆ ಮುಸುಕು ಇಲ್ಲ ಗುದ್ದಾಟವೂ ಇಲ್ಲ. ನಾನೂ ಕೂಡ ಕೆಲವು ಕಾರ್ಯಕ್ರಮಗಳಿಗೆ ಹಾಜರಾಗಲು ಆಗಿಲ್ಲ. ಅಂದ ಮಾತ್ರಕ್ಕೆ ನನಗೂ ಯಡಿಯೂರಪ್ಪ ನಡುವೆ ಗುದ್ದಾಟ ಎಂದೆ ಎಂದರ್ಥವೇ' ಎಂದು ಪ್ರಶ್ನಿಸಿದರು.
'ಅನಾರೋಗ್ಯದ ಕಾರಣಕ್ಕೆ ಅವರು ಬಂದಿಲ್ಲ. ಸ್ಥಳೀಯವಾಗಿ ನಡೆದ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಬೇರೆ, ರಾಜ್ಯ ಪ್ರವಾಸ ಮಾಡಬೇಕಾದರೆ ಆರೋಗ್ಯ ಇರಬೇಕಾಗುತ್ತದೆ' ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.