ADVERTISEMENT

ಚಿಕ್ಕಬಳ್ಳಾಪುರ: ಉರುಸ್ ಆಚರಣೆ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2011, 8:05 IST
Last Updated 12 ಅಕ್ಟೋಬರ್ 2011, 8:05 IST

ಚಿಕ್ಕಬಳ್ಳಾಪುರ: ನಗರದ ಎಂ.ಜಿ.ರಸ್ತೆ ಬಳಿಯಿರುವ ದರ್ಗಾ ಬಳಿ ಸೋಮವಾರ ರಾತ್ರಿ ಹಝರತ್ ಸೈಯದನಾ ಮಿಸ್ಕಿನ್ ಷಾ ಸೈಲಾನಿ ಅವರ ಗಂಧದ ಅಭಿಷೇಕ ಹಾಗೂ ಉರುಸ್ ಕಾರ್ಯಕ್ರಮ ನಡೆಯಿತು.

ಉರುಸ್ ಪ್ರಯುಕ್ತ ನಗರದ ಪ್ರಮುಖ ಬೀದಿಗಳಲ್ಲಿ ಸ್ತಬ್ಧಚಿತ್ರಗಳ ಪ್ರದರ್ಶನ ಮತ್ತು ಮೆರವಣಿಗೆ ನಡೆಯಿತು. ಹಜರತ್ ಟಿಪ್ಪು ಸುಲ್ತಾನ್ ಶಿಕ್ಷಣ ಸಂಸ್ಥೆ ಸೇರಿದಂತೆ ವಿವಿಧ ಸಂಘಸಂಸ್ಥೆಗಳ ಸದಸ್ಯರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಎಂ.ಜಿ.ರಸ್ತೆ, ಬಿ.ಬಿ.ರಸ್ತೆ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಸಾಗಿದ ಮೆರವಣಿಗೆಯು ನಗರಸಭೆ ವೃತ್ತದ ಮೂಲಕ ಹಾದು ದರ್ಗಾಗೆ ಮರಳಿತು.
 
ದರ್ಗಾದ ಪ್ರಮುಖರು ಮತ್ತು ಸದಸ್ಯ ರು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಕುದುರೆ, ಮಹಲ್, ಬೃಹತ್ ಕಟ್ಟಡದ ಮಾದರಿಗಳಿಂದ ಕೂಡಿದ ಸ್ತಬ್ಧಚಿತ್ರಗಳ ಮೆರವಣಿಗೆ ಎಲ್ಲರ ಗಮನಸೆಳೆಯಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT