ಗುಡಿಬಂಡೆ: ‘ಶಾಸಕನಾದ ಮೇಲೆ 4 ವರ್ಷದಲ್ಲಿ ರಸ್ತೆಗಳ ಅಭಿವೃದ್ಧಿಗೆ ಸುಮಾರು ₹ 150 ಕೋಟಿ ಅನುದಾನ ಬಿಡುಗಡೆ ಮಾಡಿದ್ದೇನೆ’ ಎಂದು ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ತಿಳಿಸಿದರು.
ತಾಲ್ಲೂಕಿನ ಬೀಚಗಾನಹಳ್ಳಿ ಗ್ರಾಮದಲ್ಲಿ ಸೋಮವಾರ ‘ಬೀಚಗಾನಹಳ್ಳಿ-ರೇಣುಮಾಕಲಹಳ್ಳಿ ಕ್ರಾಸ್ ವರೆಗೆ ₹ 5 ಕೋಟಿ ವೆಚ್ಚದ 5 ಕಿ.ಮೀ ರಸ್ತೆಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
‘ನಾನು ಜನರಿಗೆ ಏನು ಭರವಸೆ ನೀಡಿದ್ದೆನೋ ಅದನ್ನು ಈಡೇರಿಸುತ್ತಿದ್ದೇನೆ’ ಎಂದರು. ತಾಲ್ಲೂಕು ಪಂಚಾಯತಿ ಉಪಾಧ್ಯಕ್ಷ ಬೈರಾರೆಡ್ಡಿ, ಸ್ಥಾಯಿ ಸಮಿತಿ ಅಧ್ಯಕ್ಷ ಚೆಂಡೂರು ರಾಮಾಂಜಿ, ಪಟ್ಟಣ ಪಂಚಾಯತಿ ಅಧ್ಯಕ್ಷ ಜಿ.ಎಸ್. ಚಂದ್ರಶೇಖರ್, ರಮೇಶ್, ದ್ವಾರಕಿನಾಥ ನಾಯ್ಡು, ಪಾವಜೇನಹಳ್ಳಿ ನಾಗರಾಜ್, ಬೀಚಗಾನಹಳ್ಳಿ ಎನ್. ಅಶ್ವತ್ಥಪ್ಪ, ರಘುನಾಥರೆಡ್ಡಿ, ಕೃಷ್ಣೇಗೌಡ, ಆನಂದರೆಡ್ಡಿ, ಇಸ್ಮಾಯಿಲ್ ಅಜಾದ್, ನವೀನ್, ಸೋಮೇನಹಳ್ಳಿ ನಾರಾಯಣಪ್ಪ, ನರಸಿಂಹಮೂರ್ತಿ, ಬಾಲೇನಹಳ್ಳಿ ರಮೇಶ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.