ADVERTISEMENT

ಸಿಪಿಎಂ ಅಭ್ಯರ್ಥಿಗೆ ಆಟೊರಿಕ್ಷಾ ಚಾಲಕರಿಂದ ಠೇವಣಿ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2014, 19:30 IST
Last Updated 22 ಮಾರ್ಚ್ 2014, 19:30 IST

ಚಿಕ್ಕಬಳ್ಳಾಪುರ: ಇಲ್ಲಿನ ಲೋಕಸಭಾ ಕ್ಷೇತ್ರದಿಂದ ಸಿಪಿಎಂ ಅಭ್ಯರ್ಥಿಯಾಗಿ ಕಣ­ಕ್ಕಿಳಿದಿರುವ ಜಿ.ವಿ.ಶ್ರೀರಾಮರೆಡ್ಡಿ ಭದ್ರತಾ ಠೇವಣಿಗಾಗಿ ಸ್ವಂತ ಹಣ ಬಳ­ಸಿಲ್ಲ. ಅವರ ಮೇಲಿನ ಅಭಿಮಾನದಿಂದ ಆಟೊರಿಕ್ಷಾ ಚಾಲಕರೇ ಹಣ ಸಂಗ್ರಹಿಸಿ ಭದ್ರತಾ ಠೇವಣಿ ಪಾವತಿಸಿದ್ದಾರೆ.

ನಗರದಲ್ಲಿ ಶನಿವಾರ ಜಿ.ವಿ.­ಶ್ರೀರಾಮ­ರೆಡ್ಡಿ ನಾಮಪತ್ರ ಸಲ್ಲಿಸಿದ ಬಳಿಕ ನಡೆದ ಪಕ್ಷದ ಬಹಿರಂಗ ಸಭೆ­ಯಲ್ಲಿ ಈ ವಿಷಯ ತಿಳಿಸಿದ ಸಿಪಿಎಂ ನಾಯಕ ಮೀನಾಕ್ಷಿ ಸುಂದರಂ, ‘ಆಟೊರಿಕ್ಷಾ ಚಾಲಕರೇ ಹಣ ಸಂಗ್ರಹಿಸಿ ₨ 25 ಸಾವಿರ ಭದ್ರತಾ ಠೇವಣಿ ಪಾವತಿಸಿ­ದ್ದಾರೆ’ ಎಂದರು.

‘ಚುನಾವಣೆ ಪೂರ್ವಸಿದ್ಧತೆ ಹಿನ್ನೆಲೆ­ಯಲ್ಲಿ ಕೆಲ ದಿನಗಳ ಹಿಂದೆ ಯಲಹಂಕ­ದಲ್ಲಿ ಸಭೆ ನಡೆಸುತ್ತಿದ್ದ ವೇಳೆ ಹೆಚ್ಚಿನ ಆಸಕ್ತಿ ತೋರಿಸಿದ ಆಟೊರಿಕ್ಷಾ ಚಾಲ­ಕರು ಚುನಾವಣೆಯಲ್ಲಿ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದರು. ನಂತರ ಅವರೇ ಭದ್ರತಾ ಠೇವಣಿ ನೀಡಲು ಮುಂದಾದರು’ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.