ಗೌರಿಬಿದನೂರು: ತಾಲ್ಲೂಕಿನ ಅಲೀಪುರದಲ್ಲಿ ಶುಕ್ರವಾರ ಮಹಮದ್ ಪೈಗಂಬರ್ ಅವರ ಮೊಮ್ಮಗಳಾದ ಬಿಬಿ ಉಮ್ಮೆ ಕುಲ್ಸಮ್ ಅವರ ಜಯಂತ್ಯುತ್ಸವ ನಡೆಯಿತು.
ಮುಖಂಡಅಪ್ತಾಬ್ ಇ ನಿಜಾಮತ್ ನಾಟಿಕ್ ಅಲೀಪುರಿ ಮಾತನಾಡಿ, ‘ಪ್ರಾರ್ಥನೆ ಹಾಗೂ ಭಕ್ತಿಗೀತೆಗಳ ಮೂಲಕ ಇಸ್ಲಾಂ ಧರ್ಮದ ಏಳಿಗೆಗಾಗಿ ಬಿಬಿ ಉಮ್ಮೆ ಕುಲ್ಸಮ್ ಹೇಳಿದಂತೆ ನಡೆಯಬೇಕು. ಜಗತ್ತಿನಲ್ಲಿ ಮಾಡುವ ಪ್ರತಿ ಕಾರ್ಯವು ನ್ಯಾಯದಿಂದ ಕೂಡಿದ್ದರೆ ಅದಕ್ಕೆ ಎಂದಿಗೂ ಜಯವಿರುತ್ತದೆ. ಅನ್ಯಾಯಕ್ಕೆ ಅಪಜಯ ನಿಶ್ಚಿತ. ಅವರು ಮಾಡಿದ ತ್ಯಾಗ ಮತ್ತು ಜನಪರವಾದ ಕಾರ್ಯ ಶ್ಲಾಘನೀಯ’ ಎಂದು ಹೇಳಿದರು.
ಧರ್ಮದ ಅಭಿವೃದ್ಧಿ, ಹಿನ್ನೆಲೆ ಬಗ್ಗೆ ಪರಿಚಯಿಸುವ ಉದ್ದೇಶದಿಂದ ಮುಖಂಡ ಸಾದಿಕ್ ಅಲೀ ಕಾರ್ಯಕ್ರಮ ಆಯೋಜಿಸಿದ್ದರು. ಗ್ರಾಮಸ್ಥರು ಭಕ್ತಿಪೂರ್ವಕವಾಗಿ ಭಾಗವಹಿಸಿದ್ದರು. ಅಂಜುಮನಿ ಜಾಪ್ರಿಯಾದ ಅಧ್ಯಕ್ಷರಾದ ಹಾಸಿಮಿ ರಜಾ, ಗ್ರಾಮ ಪಂಚಾಯಿತಿ ಸದಸ್ಯ ಹರ್ಪತ್ ಹೈದರ್, ಮಹಮದ್ ಜಾಫರ್, ಮಹಮದ್ ರಫೀ, ಮಹಮದ್ ಹೈದರ್, ಖಾಯಿಂ ಅಲೀ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.