ADVERTISEMENT

ಚಿಕ್ಕಬಳ್ಳಾಪುರ: ತಾಂಡ್ರಮರದಹಳ್ಳಿ ಡೇರಿಯಲ್ಲಿ ಬಿಜೆಪಿ ಮೇಲುಗೈ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2020, 16:24 IST
Last Updated 11 ಅಕ್ಟೋಬರ್ 2020, 16:24 IST
ನೂತನ ನಿರ್ದೇಶಕರನ್ನು ಮುಖಂಡರು ಅಭಿನಂದಿಸಿದರು.
ನೂತನ ನಿರ್ದೇಶಕರನ್ನು ಮುಖಂಡರು ಅಭಿನಂದಿಸಿದರು.   

ಚಿಕ್ಕಬಳ್ಳಾಪುರ: ತಾಲ್ಲೂಕಿನ ಪಟ್ರೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಾಂಡ್ರಮರದಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ 13 ಸ್ಥಾನಗಳ ಪೈಕಿ 10 ಸ್ಥಾನಗಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ 10 ಅಭ್ಯರ್ಥಿಗಳು ಗೆಲುವು ಸಾಧಿಸಿದರು.

ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್‌ ಬೆಂಬಲಿತ ಅಭ್ಯರ್ಥಿಗಳಿಗೆ ಒಂದೇ ಒಂದು ಸ್ಥಾನ ಗೆಲ್ಲಲು ಸಾಧ್ಯವಾಗಲಿಲ್ಲ. ನೂತನ ನಿರ್ದೇಶಕರಾಗಿ ಟಿ.ಪಿ‌ ಮುನಿರೆಡ್ಡಿ, ಲಕ್ಷ್ಮೀಪತಿ ಟಿ.ಪಿ, ಟಿ.ವಿ.ಕೃಷ್ಣಪ್ಪ, ವೆಂಕಟೇಶ್ ಎಸ್. ಟಿ.ಎನ್‌.ಚೆನ್ನಕೇಶವಪ್ಪ, ಟಿ.ಕೆ.ಮಂಜುನಾಥ, ಆರ್.ನಾಗರಾಜು, ಟಿ.ಜಿ.ದೇವರಾಜು ಟಿ.ಎನ್.ಶ್ರೀನಿವಾಸ್, ಮಂಜುಳ ಆಯ್ಕೆಯಾದರು.

ಈ ಸಂದರ್ಭದಲ್ಲಿ ಕೋಚಿಮುಲ್ ಮಾಜಿ ಅಧ್ಯಕ್ಷ ಕೆ.ವಿ.ನಾಗರಾಜ್ ಅವರು ತಾಂಡ್ರಮರದಹಳ್ಳಿ ಗ್ರಾಮದ ಮುಖಂಡರಾದ ದೇವರಾಜು, ಗ್ರಾಮ ಪಂಚಾಯಿತಿ ಸದಸ್ಯರಾದ ಮಹೇಶ್, ಆಟೋ ಮುನಿರಾಜು, ಕೆಂಪಣ್ಣ, ಮುನಿರಾಮಯ್ಯ, ನಾರಾಯಣಸ್ವಾಮಿ, ರಘು, ನಾರಾಯಣಸ್ವಾಮಿ, ಕಣಜೇನಹಳ್ಳಿ ಆನಂದ್ ಅವರು ನೂತನ ನಿರ್ದೇಶಕರನ್ನು ಅಭಿನಂದಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.