ಚಿಕ್ಕಬಳ್ಳಾಪುರ: ಪಡಿತರ ಚೀಟಿಗಾಗಿ ಕಳೆದ ಮೂರು ವರ್ಷಗಳಿಂದ ಪರದಾಡುತ್ತಿದ್ದ ಬಾಗೇಪಲ್ಲಿ ತಾಲ್ಲೂಕಿನ ಕುಗ್ರಾಮ ಅಡವಿಕೊತ್ತೂರಿನ 77 ವರ್ಷದ ವೃದ್ಧೆ ಹುಸೇನ್ ಬೀ ಅವರಿಗೆ ಅಕ್ಕಿಯನ್ನು ತಲುಪಿಸಿರುವ ಅಧಿಕಾರಿಗಳು, ಪಡಿತರ ಚೀಟಿ ಒದಗಿಸುವ ಭರವಸೆ ನೀಡಿದ್ದಾರೆ. ಕುಟುಂಬದವರಿಂದ ಅನಾದರಕ್ಕೆ ಒಳಗಾಗಿ ಮುಪ್ಪಿನ ಕಾಲದಲ್ಲಿ ಹೊತ್ತಿನ ಊಟಕ್ಕೂ ಪರದಾಡುತ್ತಿರುವ ವಿಧವೆ ಹುಸೇನ್ ಬೀ ಅವರ ಸಂಕಷ್ಟ ಕುರಿತು ಜೂನ್ 11 ರಂದು ‘ಪ್ರಜಾವಾಣಿ’ ‘ಕಾರ್ಡ್ಗೆ ಅಲೆದಾಡಿ ನೊಂದ ಬಡಜೀವ’ ಎಂಬ ಶೀರ್ಷಿಕೆ ಅಡಿ ವಿಶೇಷ ವರದಿ ಪ್ರಕಟಿಸಿತ್ತು. – ಪ್ರಜಾವಾಣಿ ವಿಡಿಯೊ/ಈರಪ್ಪ ಹಳಕಟ್ಟಿ
ಪೂರ್ತಿ ಓದಲು ಈ ಲಿಂಕ್ ಕ್ಲಿಕ್ ಮಾಡಿ: ಪ್ರಜಾವಾಣಿ ಫಲಶ್ರುತಿ: ದೊರೆಯಿತು ಅಕ್ಕಿ, ಕಾರ್ಡ್ಗೆ ಭರವಸೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.