
ಗುಡಿಬಂಡೆ: ತಾಲ್ಲೂಕು ಟಿಎಪಿಸಿಎಂಎಸ್ ಅಧ್ಯಕ್ಷರಾಗಿ ಗಂಗಿರೆಡ್ಡಿ, ಉಪಾಧ್ಯಕ್ಷರಾಗಿ ಭಾಗ್ಯಮ್ಮ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಪ್ರೇಮ್ ಕುಮಾರ್ ಘೋಷಣೆ ಮಾಡಿದ್ದರು.
ಟಿಎಪಿಸಿಎಂಎಸ್ ಐದು ವರ್ಷಗಳ ಆಡಳಿತ ಮಂಡಳಿಗೆ ಅಧ್ಯಕ್ಷ ಸ್ಥಾನಕ್ಕೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸಂಘದ ಕಚೇರಿಯಲ್ಲಿ ಚುನಾವಣೆ ನಡೆಸಿದರು. ಅಧ್ಯಕ್ಷ ಸ್ಥಾನಕ್ಕೆ ಗಂಗಿರೆಡ್ಡಿ ಹಾಗೂ ವೆಂಕಟನರಸಪ್ಪ ನಾಮಪತ್ರ ಸಲ್ಲಿಸಿದ್ದರು. ಗಂಗಿರೆಡ್ಡಿ 8 ಮತ, ವೆಂಕಟನರಸಪ್ಪ ಅವರಿಗೆ 7 ಮತ ಪಡೆದರು.
ಉಪಾಧ್ಯಕ್ಷ ಸ್ಥಾನಕ್ಕೆ ಭಾಗ್ಯಮ್ಮ ಹಾಗೂ ಶ್ರೀರಾಮಪ್ಪ ನಾಮಪತ್ರಗಳನ್ನು ಸಲ್ಲಿಸಿದ್ದರು. ಭಾಗ್ಯಮ್ಮ 8, ಶ್ರೀರಾಮಪ್ಪ 7ಮತ ಪಡೆದರು.
ಅನೇಕ ವರ್ಷಗಳಿಂದ ಕಾಂಗ್ರೆಸ್ ಬೆಂಬಲಿತರ ವಶದಲ್ಲಿ ಸಂಸ್ಥೆಯು ಈಗ ಎನ್ಡಿಎ ಬೆಂಬಲಿತರ ಪಾಲಾಗಿದೆ.
ಮುಖಂಡರಾದ ಮಂಜುನಾಥ್ ರೆಡ್ಡಿ, ವೇಣು, ಮಂಜುನಾಥ್, ಮದ್ದರೆಡ್ಡಿ, ಶಿವಣ್ಣ, ಹಳೇ ಯರಹಳ್ಳಿ ಮಧು, ಎ.ವಿ.ಟಿ ನಾರಾಯಣಸ್ವಾಮಿ ಹಾಗೂ ನಿರ್ದೇಶಕರು ಹಾಜರಿದ್ದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.