ಚಿಕ್ಕಬಳ್ಳಾಪುರ: ಇಲ್ಲಿನ ಅಣಕನೂರು ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿ ನಾಗೇಶ್ ಎಂಬಾತ ಮೃತಪಟ್ಟಿದ್ದಾನೆ. ಈತ 2019ರಲ್ಲಿ ಕೋಲ್ಕತ್ತಾ ಮೂಲದ ಯುವತಿಯ ಹತ್ಯೆ ಮತ್ತು ದರೋಡೆ ಪ್ರಕರಣ ಆರೋಪಿಯಾಗಿದ್ದ. ಬೆಂಗಳೂರಿನ ಬಾಗಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
‘ಕೆಮ್ಮು, ನಗೆಡಿ ಇತ್ಯಾದಿ ಮಾತ್ರೆಗಳನ್ನು ಕಾರಾಗೃಹದಲ್ಲಿ ಕೊಡುತ್ತಿದ್ದರು. ಆ ಮಾತ್ರೆಗಳನ್ನೆ ಸಂಗ್ರಹಿಸಿಟ್ಟುಕೊಂಡಿದ್ದ. ಶುಕ್ರವಾರ ರಾತ್ರಿ ಹೋಗಿ ಸಂಗ್ರಹಿಸಿದ್ದ ಮಾತ್ರೆಗಳನ್ನು ನುಂಗಿದ್ದಾನೆ. ತಕ್ಷಣ ಸಿಬ್ಬಂದಿ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಕಾರ್ಯಕ್ರಮವೊಂದಕ್ಕೆ ಕೋಲ್ಕತ್ತಾದ ಯುವತಿ ನಗರಕ್ಕೆ ಬಂದಿದ್ದರು. ಬೆಳಗಿನ ಜಾವ ಆಕೆಯ ಮೇಲೆ ಎರಗಿ ದರೋಡೆಗೆ ಪ್ರಯತ್ನಿಸಿದ್ದ. ಕೊಲೆಗೈದಿದ್ದ. ಈತನನ್ನು ಬಂಧಿಸಲಾಗಿತ್ತು. ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿತ್ತು’ ಎಂದು ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.