ADVERTISEMENT

ಚಿಕ್ಕಬಳ್ಳಾಪುರ: ಮತ್ತೆ ಭೂಕಂಪನ, ಜನರಲ್ಲಿ ಆತಂಕ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2021, 20:30 IST
Last Updated 23 ಡಿಸೆಂಬರ್ 2021, 20:30 IST
ಭೂಕಂಪನದ ಆತಂಕದಿಂದ ಮನೆ ಹೊರಗೆ ಕುಳಿತಿರುವ ಜನರು
ಭೂಕಂಪನದ ಆತಂಕದಿಂದ ಮನೆ ಹೊರಗೆ ಕುಳಿತಿರುವ ಜನರು   

ಚಿಕ್ಕಬಳ್ಳಾಪುರ: ತಾಲ್ಲೂಕಿನ ಗೊಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾದೇನಹಳ್ಳಿ, ಬೀರಗಾನಹಳ್ಳಿ ಮತ್ತು ಶೆಟ್ಟಗೆರೆಯಲ್ಲಿ ಗುರುವಾರ ಮತ್ತೆ ಭೂಕಂಪನ ಸಂಭವಿಸಿದೆ.

ಮಧ್ಯಾಹ್ನ 2.16 ಗಂಟೆಗೆ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 3.6ರಷ್ಟು ತೀವ್ರತೆ ದಾಖಲಾಗಿದೆ ಎಂದುರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ತಿಳಿಸಿದೆ.

ಭೂಮಿ ನಡುಗಿದ ಅನುಭವ ಈ ಗ್ರಾಮಗಳ ಜನರಿಗೆ ಆಗಿದೆ. ತಕ್ಷಣ ಅವರು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಅಡ್ಡಗಲ್ ಮತ್ತು ಮಂಡಿಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಬುಧವಾರ ಬೆಳಿಗ್ಗೆಯಷ್ಟೇ ಭೂಕಂಪನ ಸಂಭವಿಸಿತ್ತು. ಈಗ ಮತ್ತೆ ಆ ಹಳ್ಳಿಗಳ ಸಮೀಪದಲ್ಲಿಯೇ ಕಂಪನ ಸಂಭವಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.