ADVERTISEMENT

ಸಮಸ್ಯೆ ಪರಿಹಾರಕ್ಕೆ ಹೋರಾಟ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2020, 3:24 IST
Last Updated 1 ಡಿಸೆಂಬರ್ 2020, 3:24 IST
ಚಿಂತಾಮಣಿಯಲ್ಲಿ ನಡೆದ ಜಯಕರ್ನಾಟಕ ಸಂಘಟನೆಯ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿದ್ದ ಮುಖಂಡರು
ಚಿಂತಾಮಣಿಯಲ್ಲಿ ನಡೆದ ಜಯಕರ್ನಾಟಕ ಸಂಘಟನೆಯ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿದ್ದ ಮುಖಂಡರು   

ಚಿಂತಾಮಣಿ: ಕನ್ನಡಪರ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ನೆಲ, ಜಲ, ಭಾಷೆಯ ಜತೆಗೆ ಜನಸಾಮಾನ್ಯರ ಸಮಸ್ಯೆಗಳ ಬಗ್ಗೆಯೂ ಹೋರಾಟ ನಡೆಸಬೇಕು ಎಂದು ಜಯಕರ್ನಾಟಕ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀನಿವಾಸ್ ಸಲಹೆ ನೀಡಿದರು.

ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ನಡೆದ ನಗರ ಘಟಕ, ಚಿಲಕಲನೇರ್ಪು ಹಾಗೂ ಆಟೊ ಘಟಕಗಳ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

ಸಂಘಟನೆಯ ಪದಾಧಿಕಾರಿಗಳು ಕೇವಲ ಪತ್ರಿಕಾ ಹೇಳಿಕೆಗಳಿಗೆ ಮಾತ್ರ ಸೀಮಿತವಾಗಬಾರದು. ಸಾರ್ವಜನಿಕರ ಸಮಸ್ಯೆಗಳನ್ನು ಹಿಡಿದು ಹೋರಾಟ ನಡೆಸುವ ಮೂಲಕ ಜನರ ವಿಶ್ವಾಸ ಗಳಿಸಬೇಕು. ಜನರ ಪ್ರೀತಿ, ವಿಶ್ವಾಸ ಗಳಿಸಿದರೆ ಮಾತ್ರ ಸಂಘಟನೆ ಬಲಿಷ್ಠಗೊಳಿಸಲು ಸಾಧ್ಯ ಎಂದರು.

ADVERTISEMENT

ಕನ್ನಡ ಜಲ, ನೆಲ, ಭಾಷೆಗೆ ಚ್ಯುತಿ ಬಂದಾಗ ಬೀದಿಗೆ ಇಳಿದು ಶಾಂತಿಯುತ ಹೋರಾಟಕ್ಕೆ ಸಿದ್ಧರಾಗಿರಬೇಕು. ಇತರೆ ಭಾಷೆಯ ಜನರಿಗೂ ಸ್ನೇಹ, ಸೌಹಾರ್ದದಿಂದ ನಾಡಿನ ಭಾಷೆಯ ಕಲಿಕೆಯ ಮಹತ್ವ ತಿಳಿಸಬೇಕು. ನಾಡಿನಲ್ಲಿ ವಾಸ ಮಾಡುವ ಪ್ರತಿಯೊಬ್ಬರೂ ಕನ್ನಡವನ್ನು ಕಲಿಯಲೇ ಬೇಕು ಎಂದರು.

ಜಯಕರ್ನಾಟಕ ಸಂಘಟನೆಯನ್ನು ರಾಜ್ಯದಾದ್ಯಂತ ಪುನರ್ ಸಂಘಟನೆಗೊಳಿಸಲಾಗುತ್ತಿದೆ. ಎಲ್ಲ ಕಡೆಯೂ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗುತ್ತಿದೆ. ಕಾರ್ಯಕರ್ತರು ಸಂಘಟನೆಯನ್ನು ಬಲಿಷ್ಠಗೊಳಿಸಲು ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದು ಮನವಿ ಮಾಡಿದರು.

ಪದಾಧಿಕಾರಿಗಳು: ನವೀನ್ ರೆಡ್ಡಿ-ನಗರ ಘಟಕದ ಅಧ್ಯಕ್ಷ, ಕೃಷ್ಣಾರೆಡ್ಡಿ-ಜಿಲ್ಲಾ ಕಾರ್ಯದರ್ಶಿ, ನರಸಿಂಹಯ್ಯ-ಆಟೊ ಘಟಕದ ಅಧ್ಯಕ್ಷ, ಆನಂದ-ಸಂಘಟನಾ ಕಾರ್ಯದರ್ಶಿ, ಮಸ್ತಾನ್, ವೆಂಕಟೇಶ್-ಸದಸ್ಯರು.

ಕಸಬಾ ಹೋಬಳಿ: ನಾಗರಾಜ್– ಅಧ್ಯಕ್ಷ, ವಿ. ಮಂಜುನಾಥ್– ಉಪಾಧ್ಯಕ್ಷ, ಮುರಳಿ– ಕಾರ್ಯಾಧ್ಯಕ್ಷ, ದೇವರಾಜ್– ಸಹ ಕಾರ್ಯದರ್ಶಿ, ಅಶೋಕರೆಡ್ಡಿ– ಸಂಘಟನಾ ಕಾರ್ಯದರ್ಶಿ, ಮಂಜುನಾಥ್– ಸಂಚಾಲಕ.

ಚಿಲಕಲನೇರ್ಪು ಹೋಬಳಿ: ಅಸ್ಲಾಂ– ಅಧ್ಯಕ್ಷ, ಆನಂದ್– ಕಾರ್ಯಾಧ್ಯಕ್ಷ, ಫೈರೋಜ್– ಸಂಘಟನಾ ಕಾರ್ಯದರ್ಶಿ.

ಸಂಘಟನೆಯ ಜಿಲ್ಲಾ ಕಾರ್ಯಾಧ್ಯಕ್ಷ ಪ್ರದೀಪ್, ತಾಲ್ಲೂಕು ಅಧ್ಯಕ್ಷ ರಮೇಶಕುಮಾರ್, ಕಾರ್ಯಾಧ್ಯಕ್ಷ ಸತ್ಯನಾರಾಯಣಸಿಂಗ್, ಉಪಾಧ್ಯಕ್ಷ ಮುನಿರೆಡ್ಡಿ, ಪ್ರಧಾನ ಕಾರ್ಯದರ್ಶಿ ಕೆ.ಎನ್. ಸದಾನಂದ, ಸಂಘಟನಾ ಕಾರ್ಯದರ್ಶಿ ಟಿ. ಸೀನಾ, ರವಿಕುಮಾರ್ ಹಾಗೂ ವಿವಿಧ ಘಟಕಗಳ ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.