ADVERTISEMENT

ಡ್ರೈವರ್ ರಾಮುಗೆ ಚಿನ್ನದ ಪದಕ

​ಪ್ರಜಾವಾಣಿ ವಾರ್ತೆ
Published 12 ಜೂನ್ 2022, 5:59 IST
Last Updated 12 ಜೂನ್ 2022, 5:59 IST
ಚಿನ್ನದ ಪದಕ ಪಡೆದಿರುವ ಭಾರತ‌ ತಂಡದ ಕ್ರೀಡಾಪಟುಗಳು‌ (ರಾಮು- ಕುಳಿತವರಲ್ಲಿ ಎಡದಿಂದ ನಾಲ್ಕನೇ ಕ್ರೀಡಾಪಟು)
ಚಿನ್ನದ ಪದಕ ಪಡೆದಿರುವ ಭಾರತ‌ ತಂಡದ ಕ್ರೀಡಾಪಟುಗಳು‌ (ರಾಮು- ಕುಳಿತವರಲ್ಲಿ ಎಡದಿಂದ ನಾಲ್ಕನೇ ಕ್ರೀಡಾಪಟು)   

ಗೌರಿಬಿದನೂರು: ಕೇರಳದ ತಿರುವನಂತಪುರದಲ್ಲಿ ನಡೆದ ರಾಷ್ಟ್ರಮಟ್ಟದ ಮಾಸ್ಟರ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಕರ್ನಾಟಕ ತಂಡ ಪ್ರಥಮ ಸ್ಥಾನ ಪಡೆದಿದ್ದು, ಎಲ್ಲಾ ಆಟಗಾರರು ಚಿನ್ನದ ಪದಕ ಪಡೆಯುವ ಮೂಲಕ ಅಂತರರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಈ ತಂಡದಲ್ಲಿ ತಾಲ್ಲೂಕಿನ ಪಶು ಇಲಾಖೆಯಲ್ಲಿ ವಾಹನ ಚಾಲಕರಾಗಿ‌ ಕಾರ್ಯ ನಿರ್ವಹಿಸುತ್ತಿರುವ ರಾಮು ಭಾಗವಹಿಸಿ ಚಿನ್ನದ ಪದಕ ಪಡೆದಿದ್ದಾರೆ. ಅವರು ನವೆಂಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ದೇಶವನ್ನು ಪ್ರತಿನಿಧಿಸಲಿದ್ದಾರೆ.

ಉತ್ತಮ‌ ಸಾಧನೆ ಮಾಡಿರುವ ಅವರನ್ನು ಶಾಸಕ ಎನ್.ಎಚ್. ಶಿವಶಂಕರರೆಡ್ಡಿ ಅಭಿನಂದಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.