ADVERTISEMENT

ಬಾಗೇಪಲ್ಲಿ: ದರ್ಗಾ ಅಭಿವೃದ್ಧಿಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2022, 4:39 IST
Last Updated 9 ಫೆಬ್ರುವರಿ 2022, 4:39 IST
ಚಿಂತಾಮಣಿಯಿಂದ ಗವಿ ಮಾರ್ಗವಾಗಿ ಕೈವಾರಕ್ಕೆ ಹೋಗುವ ರಸ್ತೆ ಹದಗೆಟ್ಟಿರುವುದು
ಚಿಂತಾಮಣಿಯಿಂದ ಗವಿ ಮಾರ್ಗವಾಗಿ ಕೈವಾರಕ್ಕೆ ಹೋಗುವ ರಸ್ತೆ ಹದಗೆಟ್ಟಿರುವುದು   

ಬಾಗೇಪಲ್ಲಿ: ‘ಪಟ್ಟಣದ ಹಜರತ್ ಸೈಯ್ಯದನಾ ಶೇಖ್ ಹುಸೇನ್ ಷಾ ವಲಿ ದರ್ಗಾ ಅಭಿವೃದ್ಧಿ ಕಂಡಿಲ್ಲ. ಈ ಬಗ್ಗೆ ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ಮನವಿ ಸಲ್ಲಿಸಿ ದರ್ಗಾ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಲಾಗುವುದು’ ಎಂದು ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ. ಬಾಬಾ ಫಕ್ರುದ್ದೀನ್ ಪ್ರತಿಕ್ರಿಯಿಸಿದರು.

‘ಪ್ರಜಾವಾಣಿ’ಯಲ್ಲಿ ‘ಅಭಿವೃದ್ಧಿ ಕಾಣದ ಹುಸೇನ್ ಷಾ ವಲಿ ದರ್ಗಾ’ ಬಗ್ಗೆ ವಿಶೇಷ ವರದಿ ಮಾಡಲಾಗಿದೆ. ಪಟ್ಟಣದಲ್ಲಿ ಹುಸೇನ್ ಷಾ ವಲಿ ಸಂತ ಹಾಗೂ ಪವಾಡ ಪುರುಷರಾಗಿದ್ದರು. ಹಿಂದೂ-ಮುಸ್ಲಿಂ ಸಮುದಾಯವರ ಭಾವೈಕ್ಯತೆಗೆ ಜೀವನ ಮುಡಿಪಿಟ್ಟಿದ್ದರು. ಸೂಫಿ ಮತ್ತು ಅಚಲ ಪರಂಪರೆ ಮೈಗೂಡಿಸಿಕೊಂಡಿದ್ದರು ಎಂದು ಹೇಳಿದರು.

ಇಂತಹ ಸಂತರ ದರ್ಗಾವನ್ನು ವಕ್ಫ್ ಮಂಡಳಿ ಅಧಿಕಾರಿಗಳು ದಶಕ ಕಳೆದರೂ ಅಭಿವೃದ್ಧಿಪಡಿಸಿಲ್ಲ. ಸರ್ಕಾರದಿಂದ ಮಸೀದಿ, ದರ್ಗಾ ಅಭಿವೃದ್ಧಿಗೆ ಕೋಟ್ಯಂತರ ಹಣ ಬಂದರೂ ನಿರೀಕ್ಷಿದಷ್ಟು ಪ್ರಗತಿ ಹೊಂದಿಲ್ಲ. ಚಿಂತಾಮಣಿಯ ಮುರಗಮಲ್ಲಾ ದರ್ಗಾಗೆ ಕೋಟ್ಯಂತರ ಹಣ ವ್ಯಯ ಮಾಡಿರುವ ವಕ್ಫ್ ಮಂಡಳಿಯು ಬಾಗೇಪಲ್ಲಿ ದರ್ಗಾವನ್ನು ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಆರೋಪಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.