ಚಿಂತಾಮಣಿ: ನಗರದ 220 ಕೆವಿ ವಿದ್ಯುತ್ ಸ್ವೀಕರಣ ಕೇಂದ್ರ ಹಾಗೂ 66/11 ಕೆವಿ ವಿದ್ಯುತ್ ಉಪ ಕೇಂದ್ರಗಳಲ್ಲಿ ನ. 25ರಂದು ತ್ರೈಮಾಸಿಕ ನಿರ್ವಹಣಾ ಕಾಮಗಾರಿ ನಡೆಯಲಿದೆ.
ಕಾಮಗಾರಿಯ ಹಿನ್ನೆಲೆಯಲ್ಲಿ ಅಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆವರೆಗೆ ಈ ವಿತರಣಾ ಕೇಂದ್ರದಿಂದ ವಿದ್ಯುತ್ ಸರಬರಾಜಾಗುವ ಚಿಂತಾಮಣಿ, ಶಿಡ್ಲಘಟ್ಟ ಚೇಳೂರು, ಶ್ರೀನಿವಾಸಪುರ ತಾಲ್ಲೂಕಿನ ಎಲ್ಲ ಫೀಡರ್ಗಳ ವಿದ್ಯುತ್ ಸರಬರಾಜು ಸ್ಥಗಿತಗೊಳ್ಳುತ್ತದೆ. ಗ್ರಾಹಕರು ಸಹಕರಿಸಬೇಕು ಎಂದು ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಆರ್. ಜಯಂತ್ ತಿಳಿಸಿದ್ದಾರೆ.
ಚಿಂತಾಮಣಿ, ತಳಗವಾರ, ಚೀಮಂಗಲ, ಏನಿಗದಲೆ, ನಂದಿಗಾನಹಳ್ಳಿ, ಜಿ. ಕೋಡಿಹಳ್ಳಿ, ಇರಗಂಪಲ್ಲಿ, ಎಂ. ಗೊಲ್ಲಹಳ್ಳಿ, ಬೊಮ್ಮೆಪಲ್ಲಿ ಕ್ರಾಸ್, ಶಿಡ್ಲಘಟ್ಟ, ವೈ. ಹುಣಸೇನಹಳ್ಳಿ, ಮೇಲೂರು, ಗಂಜಿಗುಂಟೆ, ಪಲಿಚೆರ್ಲು, ಚೇಳೂರು, ಚಾಕವೇಲು, ಶ್ರೀನಿವಾಸಪುರ, ತಾಡಿಗೋಳ್, ಲಕ್ಷ್ಮೀಪುರ, ಅಡ್ಡಗಲ್, ಸೋಮಯಾಜಲಹಳ್ಳಿ ಉಪ ವಿದ್ಯುತ್ ಸ್ವೀಕರಣಾ ಕೇಂದ್ರಗಳಿಂದ ವಿದ್ಯುತ್ ಪೂರೈಕೆ ಇರುವುದಿಲ್ಲ ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.