ADVERTISEMENT

ಕಲ್ಲಿದ್ದಲಿನ ಹೊಗೆಯಿಂದ ಅಸ್ವಸ್ಥರಾಗಿದ್ದವರು ಗುಣಮುಖ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2020, 2:05 IST
Last Updated 29 ನವೆಂಬರ್ 2020, 2:05 IST

ಗೌರಿಬಿದನೂರು : ತಾಲ್ಲೂಕಿನ ಅಲೀಪುರ ಬಳಿಯ ಮರಾಠಿಪಾಳ್ಯದಲ್ಲಿ ಶುಕ್ರವಾರ ಕಲ್ಲಿದ್ದಲಿನ ಹೊಗೆ ಸೇವಿಸಿ ಅಸ್ವಸ್ಥರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಒಂದೇ ಕುಟುಂಬದ ಮೂವರು ಗುಣಮುಖರಾಗಿ ಮನೆ ಸೇರಿದ್ದಾರೆ.

ಘಟನೆಯಲ್ಲಿ ಮೃತಪಟ್ಟಿದ್ದ ಅರ್ಚನಾ (16) ಅಂತ್ಯ ಸಂಸ್ಕಾರ ಕಾರ್ಯವನ್ನು ಪೋಷಕರು ಮಾಡಿದ್ದಾರೆ. ಘಟನೆಯಿಂದ ನೊಂದ ಕುಟುಂಬಕ್ಕೆ ಮಂಚೇನಹಳ್ಳಿ ಪಿಎಸೈ ಲಕ್ಷ್ಮಿನಾರಾಯಣ ಸಾಂತ್ವನ ಹೇಳಿ 25 ಸಾವಿರ ರೂಗಳನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT