ADVERTISEMENT

ಪಿಎಸ್‌ಎಸ್ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2020, 3:26 IST
Last Updated 21 ನವೆಂಬರ್ 2020, 3:26 IST
ಬಾಗೇಪಲ್ಲಿ ತಾಲ್ಲೂಕಿನ ಪಾತಪಾಳ್ಯದಲ್ಲಿ ಜಿ.ವಿ.ಶ್ರೀರಾಮರೆಡ್ಡಿ ನೇತೃತ್ವದಲ್ಲಿ ಕಾರ್ಯಕರ್ತರು ಪ್ರತಿಭಟನೆ ಮಾಡಿದರು
ಬಾಗೇಪಲ್ಲಿ ತಾಲ್ಲೂಕಿನ ಪಾತಪಾಳ್ಯದಲ್ಲಿ ಜಿ.ವಿ.ಶ್ರೀರಾಮರೆಡ್ಡಿ ನೇತೃತ್ವದಲ್ಲಿ ಕಾರ್ಯಕರ್ತರು ಪ್ರತಿಭಟನೆ ಮಾಡಿದರು   

ಬಾಗೇಪಲ್ಲಿ: ತಾಲ್ಲೂಕಿನ ಪಾತಪಾಳ್ಯದಲ್ಲಿ ರಾಷ್ಟ್ರೀಕೃತ ಬ್ಯಾಂಕ್ ತೆರೆಯುವಂತೆ ಹಾಗೂ ನಾಡಕಚೇರಿಯಲ್ಲಿ ನಡೆಯುತ್ತಿರುವ ವ್ಯಾಪಕ ಭ್ರಷ್ಟಾಚಾರ ತಡೆಯುವಂತೆ ಆಗ್ರಹಿಸಿ ಪ್ರಜಾ ಸಂಘರ್ಷ ಸಮಿತಿ, ಪಾತಪಾಳ್ಯ ಘಟಕದ ನೇತೃತ್ವದಲ್ಲಿ ಕಾರ್ಯಕರ್ತರು ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದರು.

ಪ್ರಜಾ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಜಿ.ವಿ.ಶ್ರೀರಾಮರೆಡ್ಡಿ ಮಾತನಾಡಿ, ‘ರಾಜ್ಯದ ಅತಿ ಹಿಂದುಳಿದ ಹಾಗೂ ಆಂಧ್ರಪ್ರದೇಶದ ಗಡಿ ಪ್ರದೇಶದಲ್ಲಿ ಪಾತಪಾಳ್ಯದ ಸುತ್ತಲೂ ಅನೇಕ ಗ್ರಾಮಗಳು ಇದೆ. ಪಾತಪಾಳ್ಯ ಹೋಬಳಿ ಕೇಂದ್ರ ಆದರೂ, ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿಲ್ಲ. ಕೆಲ ಗ್ರಾಮಗಳಿಗೆ ರಸ್ತೆಗಳು ಸಮರ್ಪಕವಾಗಿ ಇಲ್ಲ. ನಾಡಕಚೇರಿಯಲ್ಲಿ ರೈತರ ಕೆಲಸ
ಗಳಿಗೆ ಸಮರ್ಪಕವಾಗಿ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ವ್ಯಾಪಕವಾಗಿ ಭ್ರಷ್ಟಾಚಾರ, ಲಂಚ ಪಡೆಯುತ್ತಿದ್ದಾರೆ’ ಎಂದರು.

ಪಾತಪಾಳ್ಯದ ಮುಖ್ಯರಸ್ತೆಯಲ್ಲಿ ಪಿಎಸ್‌ಎಸ್ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ಮಾಡಿದರು. ಪಿಎಸ್ ಎಸ್ ಸಂಘಟನೆಯ ಜಿಲ್ಲಾ ಸಹ ಸಂಚಾಲಕರಾದ ಚನ್ನರಾಯಪ್ಪ, ಆರ್.ಎನ್.ರಾಜು, ಮುಖಂಡರಾದ ಎಚ್.ಎನ್. ಚಂದ್ರಶೇಖರರೆಡ್ಡಿ, ಜಿ.ಎಂ.
ರಾಮಕೃಷ್ಣಪ್ಪ, ಕೆ.ರಾಮಾಂಜಿ, ಟಿ.ಎಲ್. ವೆಂಕಟೇಶ್, ಜೈನಾಭೀ, ನಾರಾಯಣ ಸ್ವಾಮಿ, ಎಲ್.ವೆಂಕಟೇಶ್, ಬಿ.ಕೆ.ನರಸಿಂಹಪ್ಪ, ಇ.ಟಿ.ನರಸಿಂಹಾರೆಡ್ಡಿ, ಬೂರಗಮಡುಗುನರಸಿಂಹಪ್ಪ, ಜುಬೇರ್ ಅಹಮದ್ ಹಾಜರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.