ADVERTISEMENT

ಚಿಂತಾಮಣಿ | ಧಮ್ಕಿ ಪ್ರಕರಣ: ರಾಜೀವ ಗೌಡ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

​ಪ್ರಜಾವಾಣಿ ವಾರ್ತೆ
Published 17 ಜನವರಿ 2026, 16:25 IST
Last Updated 17 ಜನವರಿ 2026, 16:25 IST
<div class="paragraphs"><p>ರಾಜೀವ ಗೌಡ</p></div>

ರಾಜೀವ ಗೌಡ

   

ಚಿಂತಾಮಣಿ: ‘ಕಲ್ಟ್‌’ ಸಿನಿಮಾ ಬ್ಯಾನರ್‌ ತೆರವುಗೊಳಿಸಿದ ಶಿಡ್ಲಘಟ್ಟದ ನಗರಸಭೆ ಆಯುಕ್ತೆ ಅಮೃತಾ ಗೌಡ ಅವರಿಗೆ ದೂರವಾಣಿಯಲ್ಲಿ ಧಮ್ಕಿ ಹಾಕಿದ್ದ ಕಾಂಗ್ರೆಸ್ ಮುಖಂಡ ರಾಜೀವ ಗೌಡ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ಜ.22ಕ್ಕೆ ಮುಂದೂಡಲಾಗಿದೆ. 

ರಾಜೀವ ಗೌಡ ಪರ ವಕೀಲ ಕೆ.ಎನ್.ಶಿವಶಂಕರರೆಡ್ಡಿ ಚಿಂತಾಮಣಿಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್‌ಗೆ ನಿರೀಕ್ಷಣಾ ಜಾಮೀನು ಅರ್ಜಿಯನ್ನೂ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶ ಕಾಂತರಾಜು, ವಾದ, ವಿವಾದದ ಆಲಿಸಿ ವಿಚಾರಣೆ ಮುಂದೂಡಿದರು.  

ADVERTISEMENT

ಶಿಡ್ಲಘಟ್ಟ ನಗರಸಭೆ ಆಯುಕ್ತೆ ಜಿ.ಅಮೃತಾಗೌಡ ಅವರು ರಾಜೀವಗೌಡ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ದೂರಿನ ಆಧಾರದ ಮೇಲೆ ಬಿಎನ್‌ಎಸ್ 2023ರ ಸೆಕ್ಷನ್ 132, 224, 352, 351 (3) ಮತ್ತು 56ರ ಅಡಿ ಪೊಲೀಸರು ಎಫ್‌ಐಅರ್ ದಾಖಲಿಸಿದ್ದರು. ಪೊಲೀಸರ ಬಂಧನದಿಂದ ತಪ್ಪಿಸಿಕೊಳ್ಳಲು ರಾಜೀವ ಗೌಡ ತಲೆಮರೆಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.