ADVERTISEMENT

ಚಿಂತಾಮಣಿ | ಆರ್‌ಎಸ್‌ಎಸ್‌ ಮುಖಂಡ ವೆಂಕಟರಮಣಸ್ವಾಮಿ ನಿಧನ

​ಪ್ರಜಾವಾಣಿ ವಾರ್ತೆ
Published 3 ಜೂನ್ 2020, 11:12 IST
Last Updated 3 ಜೂನ್ 2020, 11:12 IST
ವೆಂಕಟರಮಣಸ್ವಾಮಿ
ವೆಂಕಟರಮಣಸ್ವಾಮಿ   

ಚಿಂತಾಮಣಿ: ಆರ್‌ಎಸ್‌ಎಸ್ ಹಿರಿಯ ನಾಯಕ ನಾ.ಮಾ. ವೆಂಕಟರಮಣಸ್ವಾಮಿ (86) ಮಂಗಳವಾರ ನಗರದ ಎನ್.ಆರ್. ಬಡಾವಣೆಯಲ್ಲಿನ ಅವರ ನಿವಾಸದಲ್ಲಿ ನಿಧನರಾದರು.

ಕೆಲ ದಿನಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು.

ಸಂಘ ಪರಿವಾರದಲ್ಲಿ ಸಕ್ರಿಯವಾಗಿದ್ದ ಇವರು ಜಿಲ್ಲಾ ಸಂಚಾಲಕರಾಗಿ ದಶಕಗಳ ಕಾಲ ಕೆಲಸ ಮಾಡಿದ್ದರು. ಹಿಂದೂ ಜಾಗರಣೆ ವೇದಿಕೆ, ಕನ್ಯಕಾ ಪರಮೇಶ್ವರಿ ಸಹಕಾರ ಸಂಘದಲ್ಲಿ 10 ವರ್ಷ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು. ಜ್ಞಾನವಾಹಿನಿ ವಿದ್ಯಾಸಂಸ್ಥೆಯಲ್ಲಿ 25 ವರ್ಷ ಮಹಾ ಪೋಷಕರಾಗಿ ತೊಡಗಿಕೊಂಡಿದ್ದರು.

ADVERTISEMENT

ಇವರಿಗೆ ಪುತ್ರಿ ಹಾಗೂ ಇಬ್ಬರು ಪುತ್ರರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.