ಚಿಂತಾಮಣಿ: ನಗರದ ವಾಸವಿ ವೃದ್ಧಾಶ್ರಮದಲ್ಲಿ ಇತ್ತೀಚೆಗೆ ನಿಧನರಾದ ಕವಿ ಭೋಜರಾಜ ಅವರ ಶ್ರದ್ಧಾಂಜಲಿ ಸಭೆಯನ್ನು ಶಿಲ್ಪ ಶಾಲೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ವಾಸವಿ ವೃದ್ಧಾಶ್ರಮದ ವ್ಯವಸ್ಥಾಪಕ ಕೆ.ಆರ್. ನರಸಿಂಹಪ್ಪ, ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷ ಎನ್. ಮುನಿಕೃಷ್ಣಪ್ಪ, ಕೆ.ಎನ್. ಅಕ್ರಂಪಾಷಾ, ಎಸ್.ಎಫ್.ಎಸ್. ಸುರೇಶ್ ಮಾತನಾಡಿ, ಭೋಜರಾಜ ಅವರ ಸರಳತೆ, ನಡೆ-ನುಡಿ, ವ್ಯಕ್ತಿತ್ವ ಹಾಗೂ ಸಾಹಿತ್ಯ ಸೇವೆಯನ್ನು ಸ್ಮರಿಸಿದರು.
ಭೋಜರಾಜರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಭಕ್ತಿಗೀತೆಗಳನ್ನು ಹಾಡುವುದರ ಮೂಲಕ ಮೃತರ ಆತ್ಮಕ್ಕೆ ಶಾಂತಿ ಕೋರಿದರು.
ಶಾಲೆಯ ಮುಖ್ಯಶಿಕ್ಷಕಿ ಭಾಗ್ಯಮ್ಮ, ಸಹಶಿಕ್ಷಕಿ ಮಂಜು ಭಾರ್ಗವಿ, ವೃದ್ಧಾಶ್ರಮದ ನಿರ್ವಾಹಕಿ ಜೆ.ಕೆ. ನಿರ್ಮಲಾ, ಕವಿಗಳಾದ ಎಚ್.ಎಸ್. ಅಶೋಕ್, ಶಶಿಕುಮಾರ್, ಭಜನಾ ಮಂಡಳಿಯ ರುಕ್ಮಣಿಯಮ್ಮ, ಸರಸ್ವತಮ್ಮ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.