ADVERTISEMENT

ಯುವಕನ ಹತ್ಯೆ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2021, 2:04 IST
Last Updated 26 ನವೆಂಬರ್ 2021, 2:04 IST

ಗೌರಿಬಿದನೂರು: ತಾಲ್ಲೂಕಿನ ಮಂಚೇನ ಹಳ್ಳಿ ಹೋಬಳಿಯ ಗಿಡಗಾನಹಳ್ಳಿ ಹಾಗೂ ಪುರ ಗ್ರಾಮದ ನಡುವಿನ ವರವಣಿ ಕ್ರಾಸ್ ಬಳಿ ಸುಮಾರು 28 ವರ್ಷದ ಯುವಕನನ್ನು ಹತ್ಯೆ ಮಾಡಿ ಬೇಲಿಯಲ್ಲಿ ಶವ ಎಸೆದಿರುವ ಘಟನೆ ಗುರುವಾರ ಬೆಳಕಿಗೆ ಬಂದಿದೆ.

ಎಂದಿನಂತೆ ಸ್ಥಳೀಯ ‌ರೈತರು ತಮ್ಮ ಜಮೀನುಗಳಿಗೆ ತೆರಳುವ ವೇಳೆ ರಸ್ತೆ ಪಕ್ಕದ ಜಮೀನಿನ ಸಮೀಪವಿದ್ದ ಬೇಲಿಯಲ್ಲಿ ಬಿದ್ದಿದ್ದ ಶವ ನೋಡಿದ್ದಾರೆ. ಗಾಬರಿಗೊಂಡು ಅವರು ಕೂಡಲೇ ಮಂಚೇನಹಳ್ಳಿ ಪೊಲೀಸರಿಗೆ ಮಾಹಿತಿ‌ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಅಪರಿಚಿತ ಶವವನ್ನು ಬೇಲಿಯಿಂದ ಹೊರಗೆ ತೆಗೆದು ಪರಿಶೀಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT