ADVERTISEMENT

ಆಸ್ಟ್ರೇಲಿಯಾ ಯುವತಿ ವರಿಸಿದ ಪಟ್ಟಣದ ಯುವಕ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2017, 7:27 IST
Last Updated 7 ಅಕ್ಟೋಬರ್ 2017, 7:27 IST

ಬಾಳೆಹೊನ್ನೂರು: ಆಸ್ಟ್ರೇಲಿಯಾ ದೇಶದ ಯುವತಿ ಜತೆಗೆ ಪಟ್ಟಣದ ಯುವಕ ಶುಕ್ರವಾರ ಇಲ್ಲಿಗೆ ಸಮೀಪದ ನಿಡುವಾಳೆ ಶ್ರೀರಾಮೇಶ್ವರ ದೇವಸ್ಥಾನದಲ್ಲಿ ಸಪ್ತಪದಿ ತುಳಿದರು.

ಪಟ್ಟಣದ ತುಳಸಮ್ಮ ಎ.ಆರ್.ವೆಂಕಟೇಶ್ ಪುತ್ರ ಬೆಂಗಳೂರಿನಲ್ಲಿ ಆರ್ಕಿಟೆಕ್ಟ್ ಆಗಿರುವ ಎ.ವಿ.ರಾಜ್‌ ನಾರಾಯಣ್ ಹಾಗೂ ಆಸ್ಟ್ರೇಲಿಯಾ ದೇಶದ ಸಿಡ್ನಿ ಸ್ಯಾಂಡಿ ಚಾಕ್ ಮನ್ ಮತ್ತು ಡಾನ್ ಚಾಕ್‌ ಮನ್ ಪುತ್ರಿ ಲಾರೆನ್ ಚಾಕ್ ಮನ್ ಅವರನ್ನು ಹಿಂದೂ ಧರ್ಮದ ವಿಧಿ ವಿಧಾನಗಳಂತೆ ಪೋಷಕರು ಹಾಗೂ ಸಂಬಂಧಿಗಳ ಸಮ್ಮುಖದಲ್ಲಿ ವಿವಾಹವಾದರು.

ಇಂಗ್ಲೆಂಡ್, ಆಸ್ಟ್ರೇಲಿಯಾ, ಜರ್ಮನಿ ಸೇರಿದಂತೆ ನೂರಾರು ವಿದೇಶಿಯರು ಮದುವೆಗೆ ಸಾಕ್ಷಿಯಾಗಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.