ADVERTISEMENT

ಕಳಸ ಗಾ್ರ.ಪಂ. ಮುತ್ತಿಗೆ ಕೈಬಿಡಲು ಅಧ್ಯಕ್ಷರ ಮನವಿ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2013, 9:21 IST
Last Updated 16 ಸೆಪ್ಟೆಂಬರ್ 2013, 9:21 IST

ಕಳಸ: ಇಲಿ್ಲನ ಗಾ್ರಮ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸುವ ಕಾರ್ಯಕ್ರಮ ಕೈಬಿಡುವಂತೆ ಗಾ್ರ.ಪಂ. ಅಧ್ಯಕ್ಷರು ಸಿಪಿಐ ಮುಖಂಡರನು್ನ ಕೋರಿದಾ್ದರೆ.

ಕಳಸ ಗಾ್ರ.ಪಂ. ವಾ್ಯಪಿ್ತಯಲಿ್ಲ ಅನೇಕ ಅಭಿವೃದಿ್ಧ ಕಾಮಗಾರಿಗಳು  ಸಮರ್ಪಕವಾಗಿ ನಡೆದಿಲ್ಲ ಎಂದು ಆರೋಪಿಸಿ ಸಿಪಿಐ ಸೋಮವಾರ ಪ್ರತಿಭಟನೆ ನಡೆಸಲು ಸಜಾ್ಜಗಿದೆ. ಈ ಹಿನೆ್ನಲೆಯಲಿ್ಲ ಪತಿ್ರಕಾ ಹೇಳಿಕೆ ನೀಡಿರುವ ಗಾ್ರ.ಪಂ. ಅಧ್ಯಕೆ್ಷ ಉಷಾ, ಪಟ್ಟಣದ ನೀರಿನ ಪೂರೈಕೆಯ ಸಮಸೆ್ಯ ನಿವಾರಿಸಲು ಗಂಭೀರ ಪ್ರಯತ್ನ ನಡೆಸಲಾಗುತ್ತಿದೆ. ಪಂಚಾಯಿತಿ ವಾ್ಯಪಿ್ತಯ ಕಳಪೆ ಕಾಮಗಾರಿಗಳ ಬಗೆ್ಗ ಸಂಬಂಧಪಟ್ಟ ಎಂಜಿನಿಯರ್‌ಗಳ ಗಮನ ಸೆಳೆಯಲಾಗಿದೆ ಎಂದಿದಾ್ದರೆ.

ಆಟೊ ನಿಲಾ್ದಣಗಳ ಬಗೆ್ಗ ಜಿಲಾ್ಲಧಿಕಾರಿಗಳು ಮತು್ತ ತಾ.ಪಂ ಅಧ್ಯಕ್ಷರಿಗೆ ಮನವಿ ಸಲಿ್ಲಸಲಾಗಿದೆ. ಕೆಲವು ನೂತನ ಬಡಾವಣೆಗಳ ರಸೆ್ತ ನಿರ್ಮಣದ ಬಗೆ್ಗಯೂ ಶಾಸಕರು ಮತು್ತ ಜನಪ್ರತಿನಿಧಿಗಳ ಜೊತೆ ಚರ್ಚೆ ನಡೆಸಲಾಗಿದೆ ಎಂದು ಉಷಾ ತಿಳಿಸಿದಾ್ದರೆ.

ಪಟ್ಟಣದ ಕಸ ವಿಲೇವಾರಿಗೆ ಕಾರ್ಮಿಕರ ಸಮಸೆ್ಯ ಇದ್ದರೂ ತೃಪಿ್ತಕರ ನಿರ್ವಹಣೆ ತೋರಲಾಗುತ್ತಿದೆ. ಹೊಸ ನಿವೇಶನದಲಿ್ಲ ಕಸ ಹಾಕಲು ಸಿದ್ಧತೆ ನಡೆದಿದೆ. ರಸೆ್ತಗಳ ದುರಸಿ್ತಗೆ ಅನುದಾನದ ಕೊರತೆ ಇದು್ದ ಸರ್ಕಾರ ಸ್ಪಂದಿಸುವ ನಿರೀಕೆ್ಷ ಇದೆ. ಈ ಎಲ್ಲ ಅಂಶಗಳನು್ನ ಗಮನಿಸಿ ಸೋಮವಾರ ಸಿಪಿಐ ನಡೆಸಲು ಉದೇ್ದಶಿಸಿರುವ ಗಾ್ರ.ಪಂ.ಮುತಿ್ತಗೆ ಕಾಯರ್ಕ್ರಮ ಕೈಬಿಡಬೇಕು ಎಂದು ಉಷಾ ಕೋರಿದಾ್ದರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.