ADVERTISEMENT

ಗ್ರಾಹಕರ ವೇದಿಕೆ ಸದುಪಯೋಗಕ್ಕೆ ಸಲಹೆ

​ಪ್ರಜಾವಾಣಿ ವಾರ್ತೆ
Published 2 ಜನವರಿ 2012, 8:40 IST
Last Updated 2 ಜನವರಿ 2012, 8:40 IST

ಸೀತೂರು(ನರಸಿಂಹರಾಜಪುರ): ಗ್ರಾಹಕರ ವೇದಿಕೆ ಸದುಪಯೋಗ ಪಡಿಸಿಕೊಳ್ಳಬೇಕೆಂದು ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಎಸ್.ಕೃಷ್ಣಮೂರ್ತಿ ತಿಳಿಸಿದರು.

ತಾಲ್ಲೂಕಿನ  ಸೀತೂರು ಗ್ರಾಮದಲ್ಲಿ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರಿನ ತಾಲ್ಲೂಕು ಶಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಗುರುವಾರ ನಡೆದ ರಾಷ್ಟ್ರೀಯ ಗ್ರಾಹಕ ದಿನಾಚರಣೆ ಸಮಾರಂಭದಲ್ಲಿ ಗ್ರಾಹಕ ಹಿತರಕ್ಷಣಾ ಕಾಯಿದೆಯ ಸದ್ಬಳಕೆ ಬಗ್ಗೆ ಅವರು ಉಪನ್ಯಾಸ ನೀಡಿದರು.

 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅಖಿಲ ಭಾರತೀಯ ಗ್ರಾಹಕ ಪರಿಷತ್ ಮೈಸೂರು  ಎನ್.ಆರ್,ಪುರ ಶಾಖೆಯ ಉಪಾಧ್ಯಕ್ಷ ವೈ.ಎಸ್.ಸುಬ್ರಹ್ಮಣ್ಯ, ಗ್ರಾಹಕರು ಸರಕನ್ನು ಖರೀದಿಸಿದಾಗ ಕಡ್ಡಾಯವಾಗಿ ರಶೀದಿ ಪಡೆದುಕೊಳ್ಳಬೇಕು, ಆಗ ಮಾತ್ರ ಮೋಸವಾದಾಗ ನ್ಯಾಯಲಯದಿಂದ ಸೂಕ್ತ ಪರಿಹಾರ ಪಡೆಯಲು ಸಾಧ್ಯವಾಗುತ್ತದೆ ಎಂದರು.

ಅಖಿಲ ಭಾರತೀಯ ಗ್ರಾಹಕ ಪಂಚಾಯತ್‌ನ ಕಾರ್ಯದರ್ಶಿ ಟಿ.ಸಿ.ರಂಗನಾಥ ಮಾತನಾಡಿದರು.  
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ತಾಲ್ಲೂಕು ಶಾಖೆಯ ಅಧ್ಯಕ್ಷ ಸುಬ್ಬಣ್ಣನಾಡಿಗ್ ವಹಿಸಿ ಮಾತನಾಡಿದರು.

ಸೀತೂರು-ಕುದುರೆಗುಂಡಿ ರೋಟರಿ ಸಮುದಾಯ ದಳದ ಅಧ್ಯಕಷ ಉಪೇಂದ್ರರಾವ್, ಕಮಲಾಪುರ ಸರ್ವೋದಯ ರೈತ ಕೂಟದ ಅಧ್ಯಕ್ಷ ಎ.ಎಸ್.ವೆಂಕಟರಮಣ, ಕೊನೋಡಿ ಸಾಧನ ರೈತ ಕೂಟದ ಅಧ್ಯಕ್ಷ ಕೆ.ಆರ್.ಗಣೇಶ್, ಗ್ರಾಹಕ ಪಂಚಾಯತ್‌ನ ಕಾರ್ಯದರ್ಶಿ ಎಂ.ಪಿ.ಚಕ್ರಪಾಣಿ, ಅಭೀಜ್ಞಾ, ಅನಿಲ್‌ಕುಮಾರ್  ಮತ್ತಿತರರು  ಇದ್ದರು.   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.