ADVERTISEMENT

ವಿದ್ಯಾರಣ್ಯಪುರ ಬಿಜೆಪಿ ಸ್ಥಾನೀಯ ಸಮಿತಿ ಸಭೆ

​ಪ್ರಜಾವಾಣಿ ವಾರ್ತೆ
Published 22 ಜೂನ್ 2011, 7:10 IST
Last Updated 22 ಜೂನ್ 2011, 7:10 IST
ವಿದ್ಯಾರಣ್ಯಪುರ ಬಿಜೆಪಿ ಸ್ಥಾನೀಯ ಸಮಿತಿ ಸಭೆ
ವಿದ್ಯಾರಣ್ಯಪುರ ಬಿಜೆಪಿ ಸ್ಥಾನೀಯ ಸಮಿತಿ ಸಭೆ   

ಶೃಂಗೇರಿ: ಇಲ್ಲಿನ ಪಟ್ಟಣ ಪಂಚಾಯಿತಿ ಸಮುದಾಯ ಭವನದಲ್ಲಿ ವಿದ್ಯಾರಣ್ಯಪುರ ಬಿಜೆಪಿ ಸ್ಥಾನೀಯ ಸಮಿತಿ ಸಭೆ ಸೋಮವಾರ ನಡೆಯಿತು.

ಅಧ್ಯಕ್ಷರಾಗಿ ಮಾನಗಾರು ಎಚ್.ಬಿ. ನಟರಾಜ್, ಉಪಾಧ್ಯಕ್ಷರಾಗಿ ಬಿ.ಕೆ. ಶ್ರೀನಿವಾಸ್, ರಾಜಲಕ್ಷ್ಮೀ ಕಾರ್ಯದರ್ಶಿಯಾಗಿ ಸಂಕ್ಲಾಪುರ ಮಂಜುನಾಥ್ ಮತ್ತು ಎಚ್.ಎಸ್. ಕೃಷ್ಣಮೂರ್ತಿ ಆಯ್ಕೆಯಾದರು.
ಸದಸ್ಯರುಗಳಾಗಿ ಟಿ.ಎಸ್. ಗೋಪಾಲ, ಶೈಲೆಂದ್ರ, ನಾಗರಾಜಭಟ್, ರಾಜೇಶ್ ದುರ್ಗಾದೇವಸ್ಥಾನ ಆಯ್ಕೆಗೊಂಡರು.

ಸಭೆಯಲ್ಲಿ ವಿದ್ಯಾರಣ್ಯಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾರತೀ ವೆಂಕಟೇಶ್ ಮಾತನಾಡಿದರು.
ಸಭೆ ಉದ್ದೇಶಿಸಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಎಂ.ಎಸ್. ರಂಗನಾಥ್, ಪಕ್ಷದ ಬಲವರ್ಧನೆಗಾಗಿ ಕಾರ್ಯಕರ್ತರು ಸ್ಪಂದಿಸಬೇಕು. ಚುನಾವಣೆ ಕಾಲಕ್ಕೆ ಮಾತ್ರ ಜನರ ಬಳಿಗೆ ಹೋಗದೇ ಎಲ್ಲಾ ಸಂದರ್ಭದಲ್ಲೂ ಕ್ರಿಯಾಶೀಲರಾಗಿ ಜನರೊಂದಿಗೆ ಸ್ಪಂದಿಸುವಂತೆ ತಿಳಿಸಿದರು.

ADVERTISEMENT

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಬಿ. ಶಿವಶಂಕರ್, ಅಧ್ಯಕ್ಷ ಎ.ಎಸ್. ನಯನ, ತಾಲ್ಲೂಕು ಪಂಚಾಯಿತಿ ಸದಸ್ಯೆ ಪುಷ್ಪಾ ಮಂಜೇಶ್, ಚೇತನ್‌ಹೆಗ್ಡೆ, ಕೆ.ಆರ್. ನಾಗೇಂದ್ರ ಇತರರು ಇದ್ದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕೆ.ಆರ್. ದೇವೇಂದ್ರ ಹೆಗ್ಡೆ ಅವರ ನಿಧನಕ್ಕೆ ಸಭೆ ಶ್ರದ್ಧಾಂಜಲಿ ಸಲ್ಲಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.