ADVERTISEMENT

ಅಜ್ಜಂಪುರ: ಅಪಘಾತ ಪತಿ-ಪತ್ನಿ ಸಾವು

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2025, 5:51 IST
Last Updated 4 ನವೆಂಬರ್ 2025, 5:51 IST
ಗೋವಿಂದ ನಾಯ್ಕ, ನಾಗಿ ಬಾಯಿ
ಗೋವಿಂದ ನಾಯ್ಕ, ನಾಗಿ ಬಾಯಿ   

ಅಜ್ಜಂಪುರ: ತಾಲ್ಲೂಕಿನ ಮಾಕೋನಹಳ್ಳಿ (ಬುಕ್ಕಾಂಬುಧಿ) ಅತ್ತಿಗಟ್ಟೆ ಕ್ರಾಸ್‌ ಬಳಿ ಭಾನುವಾರ ರಾತ್ರಿ ಸಂಭವಿಸಿದ ಅಪಘಾತದಲ್ಲಿ ಪತಿ-ಪತ್ನಿ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ.

ಅಜ್ಜಂಪುರದಿಂದ ಬುಕ್ಕಾಂಬುಧಿ ಕಡೆಗೆ ಸಾಗುತ್ತಿದ್ದ ಕಾರು, ಬೈಕ್‌ ನಡುವೆ ಅ‍ಪಘಾತ ನಡೆದಿದ್ದು, ವೇಳೆ ಬೈಕ್‌ನ ಹಿಂಬದಿಯಲ್ಲಿ ಕುಳಿತಿದ್ದ ಹೊಸಹಳ್ಳಿ ತಾಂಡ್ಯದ ನಾಗಿ ಬಾಯಿ (68) ಸ್ಥಳದಲ್ಲಿಯೇ ಮೃತಪಟ್ಟಿದ್ದರೆ. ಪತಿ ಗೋವಿಂದ ನಾಯ್ಕ್ (‌75) ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಬೈಕ್‌ ಚಲಾಯಿಸುತ್ತಿದ್ದ ಸಂತೋಷ ನಾಯ್ಕ ಗಾಯಗೊಂಡಿದ್ದಾರೆ. ಅಪಘಾತ ಸ್ಥಳದಲ್ಲಿ ಬಸ್‌ಗಾಗಿ ಕಾಯುತ್ತಿದ್ದ ಅತ್ತಿಗಟ್ಟೆ ಪಾರ್ವತಿ ಅವರಿಗೆ ಬೈಕ್‌ ಅಥವಾ ಕಾರಿನ ಬಿಡಿ ಭಾಗ ತಗುಲಿ ಗಾಯಗೊಂಡಿದ್ದಾರೆ. ಇಬ್ಬರೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಮೃತರ ಸಂಬಂಧಿ ಚಂದ್ರಾನಾಯ್ಕ ಪಟ್ಟಣ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಕೈಗೊಂಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.