ಮೂಡಿಗೆರೆ: ಪಟ್ಟಣದಲ್ಲಿನ ಅರಣ್ಯ ಇಲಾಖೆ ಕಚೇರಿ ಮುಂಭಾಗದಲ್ಲಿ ಎಂಟು ದಿನಗಳ ಹಿಂದೆ ಆಟೊ ಕಳುವಾಗಿದ್ದ ಪ್ರಕರಣವನ್ನು ಭೇದಿಸಿದ ಪೊಲೀಸರು, ಮುತ್ತುರಾಜ್ ಎಂಬಾತನನ್ನು ಬಂಧಿಸಿ
ದ್ದಾರೆ. ಆಟೊ ವಶಕ್ಕೆ ಪಡೆದಿದ್ದಾರೆ.
ತಾಲ್ಲೂಕಿನ ಹಂಡಗುಳಿ ಗ್ರಾಮದ ಎಚ್.ಆರ್. ಸುರೇಶ್ ಅವರ ಆಟೊ ಕಳುವಾಗಿತ್ತು. ಸಬ್ ಇನ್ ಸ್ಪೆಕ್ಟರ್ ಆದರ್ಶ್ ನೇತೃತ್ವದಲ್ಲಿ ಸಿಬ್ಬಂದಿ ಗುರುರಾಜ, ವಸಂತ, ವೈಭವ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಕಂದೇಗಾಲ ಗ್ರಾಮದ ಮಾರಿಗುಡಿ ದೇವಸ್ಥಾನದ ಬಳಿಯ ಮುತ್ತುರಾಜ್ ಬಂಧಿತ. ಆತನು ಈ ಹಿಂದೆ ಬೆಂಗಳೂರು, ಮಂಡ್ಯ, ರಾಮನಗರ, ತುಮ
ಕೂರು ಸೇರಿದಂತೆ ವಿವಿಧೆಡೆ ಐದು ಆಟೊ, ಒಂದು ದ್ವಿಚಕ್ರ ವಾಹನ ಕಳವು ಮಾಡಿದ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
ಮದ್ಯ ಅಕ್ರಮ ಮಾರಾಟ: ಬಂಧನ
ಆಲ್ದೂರು: ಮದ್ಯ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಸಮೀಪದ ಆವತಿ ಹೋಬಳಿ ಬಸವರವಳ್ಳಿ ಗ್ರಾಮದ ನವೀನ್ ಎಂಬಾತನನ್ನು ಬಂಧಿಸಿದ ಪೊಲೀಸರು ಆರೋಪಿಯಿಂದ ₹7,407 ಮೌಲ್ಯ ಮದ್ಯ ವಶಪಡಿಸಿಕೊಂಡಿದ್ದಾರೆ. ಪಿಎಸ್ಐ ಸಜಿತ್ ಕುಮಾರ್, ಸಿಬ್ಬಂದಿ ಚಂದ್ರಪ್ಪ, ಶಶಿಧರ್, ಹರ್ಷ, ಪ್ರತಾಪ್ ಹಾಗೂ ಮಹೇಶ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.