ADVERTISEMENT

ಚಿಕ್ಕಮಗಳೂರು ಬಳಿ ಬೈಕ್- ಬಸ್ ಡಿಕ್ಕಿ: ಮೂವರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2022, 12:23 IST
Last Updated 26 ಮಾರ್ಚ್ 2022, 12:23 IST
   

ಚಿಕ್ಕಮಗಳೂರು: ತಾಲ್ಲೂಕಿನ ಕೈಮರ ಬಳಿ ಕೆಎಸ್‌ಆರ್‌ಟಿಸಿ ಬಸ್ಮತ್ತು ದ್ವಿಚಕ್ರ ವಾಹನ ಮುಖಾಮುಖಿ ಡಿಕ್ಕಿಯಾಗಿ ಮೂವರು ಗಾಯಗೊಂಡಿದ್ದಾರೆ.

ಗಾಯಗೊಂಡವರು ಬೈಕ್ ಸವಾರರು. ತೋಟದಹಳ್ಳಿಯ ದರ್ಶನ್, ಪ್ರತೀಕ್, ಆಲ್ದೂರಿನ ತರುಣ್ ಗಾಯಗೊಂಡವರು. ಮೂವರಿಗೂ ಕಾಲಿಗೆ ಪೆಟ್ಟಾಗಿದೆ.

ಮೂವರನ್ನು ಜಿಲ್ಲಾಸ್ಪತ್ರೆಗೆ ಒಯ್ಯಲಾಗಿದೆ. 'ತರೀಕೆರೆ ಕಡೆಗೆ ಸಾಗುತ್ತಿದ್ದಬೈಕ್ ಮತ್ತು ತರೀಕೆರೆ ಕಡೆಗೆ ಬಸ್ ಗುದ್ದಿ ಅವಘಡ ಸಂಭವಿಸಿದೆ' ಎಂದು ಗ್ರಾಮಾಂತರ ಠಾಣೆ ಪೊಲೀಸರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.