ADVERTISEMENT

ಹಳ್ಳದಲ್ಲಿ ಶವ ಪತ್ತೆ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2020, 2:29 IST
Last Updated 8 ಆಗಸ್ಟ್ 2020, 2:29 IST

ಚಿಕ್ಕಮಗಳೂರು: ಜಿಲ್ಲೆಯ ಶೃಂಗೇರಿ ತಾಲ್ಲೂಕಿನ ಹರೂರುಮಕ್ಕಿ ಗ್ರಾಮದ ಜಮೀನು ಪಕ್ಕದ ಹಳ್ಳದಲ್ಲಿ ವಾಸುದೇವ ಭಟ್ಟ (56) ಅವರ ಶವ ಪತ್ತೆಯಾಗಿದೆ.

‘ವಾಸುದೇವ ಅವರು ಶುಕ್ರವಾರ ಬೆಳಿಗ್ಗೆ ಭತ್ತ ನಟ್ಟಿ ನಿಟ್ಟಿನಲ್ಲಿ ತಯಾರಿಗೆ ಗದ್ದೆಗೆ ತೆರಳಿದ್ದರು. ಸಂಜೆಯಾದರೂ ವಾಪಸ್‌ ಬಂದಿರಲಿಲ್ಲ. ಹುಡುಕಾಡಿದಾಗ ಹಳ್ಳದಲ್ಲಿ ಶವ ಪತ್ತೆಯಾಗಿದೆ’ ಎಂದು ಪೊಲೀಸ್‌ ಇನ್‌ಸ್ಪೆಕ್ಟರ್‌ ಪ್ರಭಾಕರ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ. ವಾಸುದೇವ ಅವರಿಗೆ ಪತ್ನಿ ಇದ್ದಾರೆ.

ಶೃಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.