ADVERTISEMENT

ಕಳಸ: ನೀರಿನಲ್ಲಿ ಮುಳುಗಿ ಬಾಲಕ ಸಾವು

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2020, 4:28 IST
Last Updated 1 ನವೆಂಬರ್ 2020, 4:28 IST
ರಾಜ್ಯ ಛಾಯಾಗ್ರಾಹಕರ ಸಂಘದ ರಾಜ್ಯ ಬಂದ್ ಗೆ ಬೆಂಬಲಿಸಿ ನರಸಿಂಹರಾಜಪುರದ ತಾಲ್ಲೂಕು ಛಾಯಾಗ್ರಾಹಕ ಸಂಘದವರು ಶನಿವಾರ ಸ್ಟುಡಿಯೋ ಬಂದ್ ಮಾಡಿ ಪ್ರತಿಭಟಿಸಿದರು.
ರಾಜ್ಯ ಛಾಯಾಗ್ರಾಹಕರ ಸಂಘದ ರಾಜ್ಯ ಬಂದ್ ಗೆ ಬೆಂಬಲಿಸಿ ನರಸಿಂಹರಾಜಪುರದ ತಾಲ್ಲೂಕು ಛಾಯಾಗ್ರಾಹಕ ಸಂಘದವರು ಶನಿವಾರ ಸ್ಟುಡಿಯೋ ಬಂದ್ ಮಾಡಿ ಪ್ರತಿಭಟಿಸಿದರು.   

ಕಳಸ: ಇಲ್ಲಿಗೆ ಸಮೀಪದ ಸೂರುಮನೆ ಬಳಿ ಶನಿವಾರ ಮಧ್ಯಾಹ್ನ ಬಾಲಕನೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.

‘ಸೂರುಮನೆ ಬಳಿ ಜಲಪಾತ ವೀಕ್ಷಿಸಲು ಗುತ್ಯಡ್ಕದ ಶ್ರೀನಿವಾಸ ಗೌಡ ಅವರ ಮಗ ವಂಶಿತ್ (15) ತನ್ನ ಸ್ನೇಹಿತರ ಜೊತೆ ಮಧ್ಯಾಹ್ನ 2 ಗಂಟೆ ವೇಳೆಗೆ ತೆರಳಿದ್ದನು. ತನಗೆ ಈಜು ಬರುತ್ತದೆ ಎಂದು ಆಳದ ಪ್ರದೇಶದಲ್ಲಿ ಈಜಲು ತೆರಳಿದ್ದನು. ಇದನ್ನು ಕಂಡು ಜೊತೆಗೆ ಇದ್ದವರು ಎಚ್ಚರಿಕೆಯ ಮಾತನ್ನು ಆಡಿದರೂ ಕೇಳದೆ ಆಳದ ಪ್ರದೇಶದಲ್ಲಿ ಈಜುವಾಗ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ’ ಎಂದು ಸಬ್ ಇನ್‌ಸ್ಪೆಕ್ಟರ್ ಮಂಜಯ್ಯ ಮಾಹಿತಿ ನೀಡಿದ್ದಾರೆ.

ಪ್ರೊಬೆಷನರಿ ಎಸಿಎಫ್‌ ಚೇತನ್ ಗಸ್ತಿ ಸ್ಥಳಕ್ಕೆ ಭೇಟಿ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.