ADVERTISEMENT

ಟಿಪ್ಪರ್– ಬಸ್ ಡಿಕ್ಕಿ: ಮಹಿಳೆ ಸಾವು

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2022, 6:06 IST
Last Updated 29 ನವೆಂಬರ್ 2022, 6:06 IST
ಮುತ್ತಿನಕೊಪ್ಪ ಬಳಿ ಟಿಪ್ಪರ್‌ಗೆ ಮುಖಾಮುಖಿಯಾದ ಬಸ್ ಮುಂಭಾಗ ನಜ್ಜುಗುಜ್ಜಾಗಿರುವುದು
ಮುತ್ತಿನಕೊಪ್ಪ ಬಳಿ ಟಿಪ್ಪರ್‌ಗೆ ಮುಖಾಮುಖಿಯಾದ ಬಸ್ ಮುಂಭಾಗ ನಜ್ಜುಗುಜ್ಜಾಗಿರುವುದು   

ಎನ್.ಆರ್.ಪುರ: ತಾಲ್ಲೂಕಿನ ಮುತ್ತಿನಕೊಪ್ಪ ಗ್ರಾಮದ ವ್ಯಾಪ್ತಿಯ ಸೇತುವೆಯ ಮೇಲೆ ಸೋಮವಾರ ಸಂಜೆ ಖಾಸಗಿ ಬಸ್ ಮತ್ತು ಟಿಪ್ಪರ್ ಮುಖಾಮುಖಿಯಾಗಿದ್ದು, ಮಹಿಳೆ ಮೃತ ಪಟ್ಟಿದ್ದು, ಹಲವರಿಗೆ ಗಾಯಗಳಾಗಿವೆ.

ಮುತ್ತಿನಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ಸಹಾಯಕಿ ರತ್ನಮ್ಮ (56) ಮೃತಪಟ್ಟವರು. ಹೊರನಾಡಿನಿಂದ ಶಿವಮೊಗ್ಗಕ್ಕೆ ಹೋಗುತ್ತಿದ್ದ ಬಸ್ ಮತ್ತು ಟಿಪ್ಪರ್ ಲಾರಿ ನಡುವೆ ಡಿಕ್ಕಿ ಸಂಭವಿಸಿ ಬಸ್ ಮುಂಭಾಗ ನಜ್ಜುಗುಜ್ಜಾಗಿದೆ. ಬಸ್‌ನಲ್ಲಿ ಸುಮಾರು 35 ಪ್ರಯಾಣಿಕರು ಇದ್ದರು. 25ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ.

ಗಾಯಗೊಂಡ ಎನ್.ಆರ್.ಪುರ ತಾಲ್ಲೂಕಿನ ಮೂಡಬಾಗಿಲು ಗ್ರಾಮದ ರಂಜಿತಾ(36), ಧರ್ಮಯ್ಯ, ಕೆ.ಕಣಬೂರು ಗ್ರಾಮದ ಮಧುಸೂಧನ್ (25), ಕಳ್ಳಿಕೊಪ್ಪದ ಪ್ರೀತಂ, ಮಾಕೋಡಿನ ಜಾನ್ಸನ್ (30), ಸಿರ್ಸಿ ಸಿದ್ದಾಪುರದ ನಿವಾಸಿಗಳಾದ ಸಂತೋಷ್ (46), ಆರತಿ(38), ಶಿವಮೊಗ್ಗದ ಚಂದ್ರಶೇಖರ್ (45) ಸುಜಾತಾ (40), ಶಿವಮೊಗ್ಗದ ಸಮೀರ್ (45) ಅವರಿಗೆ ನರಸಿಂಹರಾಜಪುರ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆ ಶಿವಮೊಗ್ಗದ ಮೇಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.