ADVERTISEMENT

ಒಬ್ಬರು ಸಾವು, ಆರು ಮಂದಿಗೆ ಗಾಯ

ಗಿರಿಶ್ರೇಣಿಯ ಮಾಣಿಕ್ಯಧಾರಾ ಮಾರ್ಗದಲ್ಲಿ ಉರುಳಿದ ಕಾರು

​ಪ್ರಜಾವಾಣಿ ವಾರ್ತೆ
Published 7 ಜುಲೈ 2019, 15:59 IST
Last Updated 7 ಜುಲೈ 2019, 15:59 IST
ಜಿಲ್ಲಾಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಯಿತು.
ಜಿಲ್ಲಾಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಯಿತು.   

ಚಿಕ್ಕಮಗಳೂರು: ತಾಲ್ಲೂಕಿನ ಗಿರಿ ಶ್ರೇಣಿಯ ಮಾಣಿಕ್ಯಾಧಾರದಿಂದ ವಾಪಸ್ಸಾಗುತ್ತಿದ್ದಾಗ ಕಾರು ಉರುಳಿಬಿದ್ದು ಸಮೀರಾ ಬಾನು (35)ಎಂಬುವರು ಮೃತಪಟ್ಟು, 6 ಮಂದಿ ಭಾನುವಾರ ಗಾಯಗೊಂಡಿದ್ದಾರೆ.

ಸಂಜೆ 4.30ರ ಹೊತ್ತಿಗೆ ಅವಘಡ ಸಂಭವಿಸಿದೆ. ಸಮೀರಾ ಪತಿ ಅಬೂಬಕ್ಕರ್‌ (43), ಪುತ್ರ ಬಾಸಿದ್‌ (12), ಪುತ್ರಿಯರಾದ ಸಾಲ್ವಾ (6) ಆಯಿಷಾ (4) , ಅಬೂಬಕ್ಕರ್‌ ಸಹೋದರ ಮಹಮ್ಮದ್‌ ಬ್ಯಾರಿ ಅಲಿಯಾಸ್‌ ಜಲಾನಿ (53), ಜಲಾನಿ ಪುತ್ರಿ (11) ಗಾಯಗೊಂಡವರು. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಕಳಿಸಲಾಗಿದೆ.

ಅಬೂಬಕ್ಕರ್‌ ಕುಟುಂಬ ಉಡುಪಿ ಜಿಲ್ಲೆಯ ಪಡುಬಿದ್ರಿ ತಾಲ್ಲೂಕಿನ ಕಂಚಿನಡ್ಕ ಊರಿನವರು. ಮಹಮ್ಮದ್‌ ಬ್ಯಾರಿ ಅವರು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಮಂಜನಾಡ ಊರಿನವರು. ಪ್ರವಾಸಕ್ಕೆ ಬಂದಿದ್ದರು.

ADVERTISEMENT

ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.