ADVERTISEMENT

ಸಮಯಕ್ಕೆ ಸಿಗದ ಚಿಕಿತ್ಸೆ; ಕರು ಸಾವು

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2022, 4:32 IST
Last Updated 1 ಡಿಸೆಂಬರ್ 2022, 4:32 IST
ಕೊಪ್ಪದ ಮರಿತೊಟ್ಲು ನಿವಾಸಿ ಸುಮಂತ್ ಎಂಬುವರಿಗೆ ಸೇರಿದ ದನದ ಕರು ಮೃತಪಟ್ಟಿದೆ.
ಕೊಪ್ಪದ ಮರಿತೊಟ್ಲು ನಿವಾಸಿ ಸುಮಂತ್ ಎಂಬುವರಿಗೆ ಸೇರಿದ ದನದ ಕರು ಮೃತಪಟ್ಟಿದೆ.   

ಕೊಪ್ಪ: ‘ಚರ್ಮಗಂಟು ರೋಗ ಕಾಣಿಸಿಕೊಂಡಿದ್ದ ಹನ್ನೊಂದು ತಿಂಗಳ ಕರುವೊಂದು ಸಮರ್ಪಕ ಚಿಕಿತ್ಸೆ ಸಿಗದೆ ಭಾನುವಾರ ಮೃತಪಟ್ಟಿದೆ’ ಎಂದು ತಾಲ್ಲೂಕಿನ ಮರಿತೊಟ್ಲು ಗ್ರಾಮದ ಸುಮಂತ್ ಎಂಬುವರು ದೂರಿದ್ದಾರೆ.

‘ಕರುವಿಗೆ ಜ್ವರ ಇತ್ತು, ಶನಿವಾರದಂದು ಕೊಪ್ಪ ಪಶು ಆಸ್ಪತ್ರೆಗೆ ಕರೆ ಮಾಡಿ ತಿಳಿಸಲಾಗಿತ್ತು. ಅಲ್ಲಿ ವೈದ್ಯರು, ಸಿಬ್ಬಂದಿ ಕೊರತೆಯಿಂದ ಸಕಾಲಕ್ಕೆ ಬಂದಿಲ್ಲ. ಮರುದಿನ ಬೆಳಿಗ್ಗೆ ಕರು ಮೃತಪಟ್ಟಿತ್ತು’ ಎಂದು ಹೇಳಿದ್ದಾರೆ.

‘ತಾಲ್ಲೂಕಿನ ಅಲ್ಲಲ್ಲಿ ಚರ್ಮಗಂಟು ಕಾಯಿಲೆ ಕಾಣಿಸಿಕೊಂಡಿದೆ. ಕಾಲುಬಾಯಿ ಜ್ವರಕ್ಕೆ ಔಷಧ ನೀಡಲಾಗುತ್ತಿದ್ದು, ಮುಂಜಾಗ್ರತೆವಾಗಿ ಚರ್ಮಗಂಟು ರೋಗಕ್ಕೂ ಔಷಧ ನೀಡಲಾಗುತ್ತಿದೆ’ ಎಂದು ಪಶು ಆಸ್ಪತ್ರೆ ವೈದ್ಯಾಧಿಕಾರಿ ಡಾ.ಪ್ರದೀಪ್ ಪ್ರತಿಕ್ರಿಯಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.