ADVERTISEMENT

ಸ್ವಚ್ಛ ಪರಿಸರ ಅರಿವು: 850 ಕಿ.ಮೀ. ಸೈಕಲ್ ಜಾಥಾ

​ಪ್ರಜಾವಾಣಿ ವಾರ್ತೆ
Published 30 ಜುಲೈ 2023, 13:29 IST
Last Updated 30 ಜುಲೈ 2023, 13:29 IST
ಕೊಪ್ಪ ಸೈಕ್ಲಿಂಗ್ ಕ್ಲಬ್ ನಿಂದ ಸೈಕಲ್ ಜಾಥಾ ನಡೆಯಿತು
ಕೊಪ್ಪ ಸೈಕ್ಲಿಂಗ್ ಕ್ಲಬ್ ನಿಂದ ಸೈಕಲ್ ಜಾಥಾ ನಡೆಯಿತು   

ಕೊಪ್ಪ: ರಕ್ತದಾನ, ನೇತ್ರದಾನ, ಅಂಗಾಂಗ ದಾನ, ಸ್ವಚ್ಛ ಪರಿಸರ ಘೋಷಣೆಯೊಂದಿಗೆ ಶಿವಮೊಗ್ಗ ಮತ್ತು ಕೊಪ್ಪ ಸೈಕ್ಲಿಂಗ್ ಕ್ಲಬ್ ವತಿಯಿಂದ ಈಚೆಗೆ ಶಿವಮೊಗ್ಗ, ತಿರುಪತಿ ಹಾಗೂ ಪುದುಚೇರಿ ಸೈಕಲ್ ಜಾಥಾ ನಡೆಯಿತು.

ಕೊಪ್ಪ ಸೈಕ್ಲಿಂಗ್ ಕ್ಲಬ್ ನ ಸದಸ್ಯರಾದ ಶ್ರೀರಂಗ ಮೆಡಿಕಲ್ ಮಾಲೀಕ ನರೇಂದ್ರ ಕಾಮತ್, ಅರುಣ್ ಬಾಳಗಡಿ, ಜಿ.ಸಂತೋಷ್, ರಾಜೇಶ್ ಭಟ್ ಹಾಗೂ ಶಿವಮೊಗ್ಗದ ಸೈಕಲ್ ಸವಾರರ ತಂಡ ಒಳಗೊಂಡಂತೆ ಒಟ್ಟು 21 ಮಂದಿ ಜಾಥಾದಲ್ಲಿ ಪಾಲ್ಗೊಂಡಿದ್ದರು.

‘ಒಟ್ಟು 850 ಕಿ.ಲೋ ಮೀಟರ್ ದೂರ, ಒಂದು ವಾರಗಳ ಕಾಲ ಸೈಕಲ್ ಜಾಥಾ ನಡೆಸಲಾಯಿತು. ರಕ್ತದಾನ, ನೇತ್ರದಾನ, ಪರಿಸರ ಕಾಳಜಿಗಾಗಿ ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಜಾಥಾ ಹಮ್ಮಿಕೊಳ್ಳಲಾಗಿತ್ತು’ ಎಂದು ಜಾಥಾದಲ್ಲಿ ಪಾಲ್ಗೊಂಡಿದ್ದ ಅರುಣ್ ಬಾಳಗಡಿ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.