ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕೋವಿಡ್–19ನಿಂದಾಗಿ ಇಬ್ಬರು ಶುಕ್ರವಾರ ಮೃತಪಟ್ಟಿದ್ದಾರೆ. 64 ಮಂದಿಗೆ ಸೋಂಕು ದೃಢಪಟ್ಟಿದೆ, 21 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಕಡೂರು ತಾಲ್ಲೂಕು ಬೀರೂರಿನ 35 ವರ್ಷದ ಮಹಿಳೆ, ಮೂಡಿಗೆರೆ ತಾಲ್ಲೂಕಿನ ಸ್ವೀಪರ್ ಕಾಲೋನಿ ನಿವಾಸಿ 75 ವರ್ಷದ ವೃದ್ಧ ಮೃತಪಟ್ಟವರು ಎಂದು ವೈದ್ಯರು ತಿಳಿಸಿದ್ದಾರೆ.
ತಾಲ್ಲೂಕುವಾರು ಸೋಂಕಿತರ ಸಂಖ್ಯೆ: ಚಿಕ್ಕಮಗಳೂರು– 24, ಕಡೂರು –22, ಮೂಡಿಗೆರೆ, ಅಜ್ಜಂಪುರದಲ್ಲಿ ತಲಾ 5, ನರಸಿಂಹರಾಜಪುರ– 4, ಶೃಂಗೇರಿ–2, ಕೊಪ್ಪ, ತರೀಕೆರೆಯಲ್ಲಿ ತಲಾ ಒಬ್ಬರಿಗೆ ಸೋಂಕು ಪತ್ತೆಯಾಗಿದೆ. ಜಿಲ್ಲೆಯಲ್ಲಿ 741 ಸಕ್ರಿಯ ಪ್ರಕರಣಗಳು ಇವೆ. ಈವರೆಗೆ 578ಮಂದಿ ಗುಣಮುಖರಾಗಿದ್ದಾರೆ. ಈವರೆಗೆ 29 ಮಂದಿ (ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಮೃತಪಟ್ಟ ಜಿಲ್ಲೆಯ ಇಬ್ಬರು ಸಹಿತ) ಮೃತಪಟ್ಟಿದ್ದಾರೆ. ಜಿಲ್ಲೆಯ ವಿವಿಧೆಡೆ 402ನಿಯಂತ್ರಿತ ವಲಯ(ಕಂಟೈನ್ಮೆಂಟ್ ಝೋನ್)ಗಳು ಇವೆ. ಈವರೆಗಿನ ಒಟ್ಟು ಪ್ರಕರಣಗಳ ಸಂಖ್ಯೆ 1367ಕ್ಕೆ ಏರಿಕೆಯಾಗಿದೆ.
ಪಟ್ಟಿ
ಜಿಲ್ಲೆಯಲ್ಲಿ ಒಟ್ಟು:1367
ದಿನದ ಏರಿಕೆ: 64
ಸಕ್ರಿಯ ಪ್ರಕರಣ:741
ದಿನದ ಏರಿಕೆ: 41
ಗುಣಮುಖ: 578
ದಿನದ ಏರಿಕೆ: 21
ಸಾವು: 29
ದಿನದ ಏರಿಕೆ: 2
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.