ಬೀರೂರು (ಚಿಕ್ಕಮಗಳೂರು ಜಿಲ್ಲೆ): ಕಡೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ನಿಯೋಜಿತ ಅಭ್ಯರ್ಥಿ ಸಿ.ಎಂ. ಧನಂಜಯ ಅವರ ಹೆಸರಿನಲ್ಲಿ ಬೀರೂರು ಪಟ್ಟಣದ ಮಾರ್ಗದ ಕ್ಯಾಂಪ್, ಉಪ್ಪಾರಕ್ಯಾಂಪ್ ಮೊದಲಾದ ಪ್ರದೇಶಗಳಲ್ಲಿ ಶುಕ್ರವಾರ ರಾತ್ರಿ ಮಹಿಳೆಯರಿಗೆ ಸೀರೆ ವಿತರಿಸಲಾಗಿದೆ.
‘ಪಕ್ಕದ ಮನೆಯವರೊಬ್ಬರು ಮಹದೇವಪ್ಪ ಶಾಲೆಯ ಬಳಿ ಜೆಡಿಎಸ್ನವರು ಸೀರೆ ಹಂಚುತ್ತಿದ್ದಾರೆ, ಬನ್ನಿ ಹೋಗೋಣ ಎಂದಿದ್ದರಿಂದ ಅಲ್ಲಿಗೆ ಹೋಗಿದ್ದೆ. ನಮಗೆ ಪರಿಚಯವಿಲ್ಲದ ಕಾರ್ಯರ್ತರು ಅಲ್ಲಿ ನಮಗೂ ಸೀರೆ ಮತ್ತು ಸುಮಾರು 8 ಪುಟದ ಬುಕ್ಲೆಟ್ ವಿತರಿಸಿದರು. ಹಬ್ಬದ ಗಿಫ್ಟ್ ಇರಬಹುದು ಎಂದುಕೊಂಡು ಪಡೆದುಕೊಂಡೆವು’ ಎಂದು ಮಹಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.