ADVERTISEMENT

ಆನೆ ದಾಳಿ; ರೈತ ಸಾವು

​ಪ್ರಜಾವಾಣಿ ವಾರ್ತೆ
Published 23 ಜನವರಿ 2019, 19:06 IST
Last Updated 23 ಜನವರಿ 2019, 19:06 IST

ಚಿಕ್ಕಮಗಳೂರು: ತಾಲ್ಲೂಕಿನ ಹೊಸಪೇಟೆಯ ಅರವಿಂದನಗರದ ಬಳಿಯ ಜಮೀನಿನಲ್ಲಿ ಮಂಗಳವಾರ ರಾತ್ರಿ ಕಾಡಾನೆ ದಾಳಿಯಿಂದ ಕಡೂರು ತಾಲ್ಲೂಕಿನ ಎಮ್ಮೆದೊಡ್ಡಿ ಗ್ರಾಮದ ರೈತ ಕುಮಾರ ನಾಯಕ್‌ (50) ಮೃತಪಟ್ಟಿದ್ದಾರೆ.

ಅರವಿಂದನಗರದ ಹಾಲಿಯಪ್ಪ ಅವರ ಜಮೀನಿನಲ್ಲಿ ಶುಂಠಿ ಕೀಳುವ ಕೆಲಸಕ್ಕೆ ಕುಮಾರ ನಾಯಕ್‌ ಹೋಗಿದ್ದರು. ಬೀಡಿ ತರಲು ರಾತ್ರಿ ಅರವಿಂದನಗರಕ್ಕೆ ಹೋಗುತ್ತಿದ್ದಾಗ ಆನೆಯೊಂದು ಎರಗಿ ತುಳಿದು, ಸೊಂಡಲಿನಿಂದ ಹೊಡೆದು ಸಾಯಿಸಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT