ADVERTISEMENT

‘ಗ್ರಾಮೀಣ ಕ್ರೀಡೆಯಿಂದ ಜೀವನೋತ್ಸಾಹ’

ಬಣಕಲ್‌ನಲ್ಲಿ ಕೆಸರುಗದ್ದೆ ಕ್ರೀಡಾಕೂಟ: ಕೊಡಪಾನ ನಡಿಗೆ, ಹಗ್ಗಜಗ್ಗಾಟ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2022, 3:53 IST
Last Updated 8 ಆಗಸ್ಟ್ 2022, 3:53 IST
ಬಣಕಲ್‍ನ ಕುವೆಂಪುನಗರದಲ್ಲಿ ಕಪುಚಿನ್ ಕೃಷಿಕ್ ಸೇವಾ ಕೇಂದ್ರ,ವಿಮುಕ್ತಿ ಸ್ವಸಹಾಯ ಮಹಿಳಾ ಒಕ್ಕೂಟದ ವತಿಯಿಂದ ಕೆಸರುಗದ್ದೆಯಲ್ಲಿ ಒಂದು ದಿನ ಕ್ರೀಡಾಕೂಟ ನಡೆಯಿತು
ಬಣಕಲ್‍ನ ಕುವೆಂಪುನಗರದಲ್ಲಿ ಕಪುಚಿನ್ ಕೃಷಿಕ್ ಸೇವಾ ಕೇಂದ್ರ,ವಿಮುಕ್ತಿ ಸ್ವಸಹಾಯ ಮಹಿಳಾ ಒಕ್ಕೂಟದ ವತಿಯಿಂದ ಕೆಸರುಗದ್ದೆಯಲ್ಲಿ ಒಂದು ದಿನ ಕ್ರೀಡಾಕೂಟ ನಡೆಯಿತು   

ಕೊಟ್ಟಿಗೆಹಾರ:‘ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹ ನೀಡಬೇಕು’ ಎಂದು ಮಾಜಿ ಯೋಧ ಎನ್.ಟಿ.ದಿನೇಶ್ ಹೇಳಿದರು.

ಬಣಕಲ್ ಕಪುಚಿನ್ ಕೃಷಿಕ ಸೇವಾ ಕೇಂದ್ರ, ವಿಮುಕ್ತಿ ಸ್ವಸಹಾಯ ಸಂಘಗಳ ಒಕ್ಕೂಟದ ವತಿಯಿಂದ ಬಣಕಲ್‍ನ ಕುವೆಂಪು ನಗರದ ಕೆಸರುಗದ್ದೆಯಲ್ಲಿ ನಡೆದ ‘ಕೆಸರಲ್ಲಿ ಒಂದು ದಿನ’ ಕ್ರೀಡಾಕೂಟದಲ್ಲಿ ಅವರು ಮಾತನಾಡಿದರು.

‘ಕೆಸರು ಗದ್ದೆ ಕ್ರೀಡಾಕೂಟವು ಮನೋರಂಜನೆಯ ಜತೆ ದೈಹಿಕ ಆರೋಗ್ಯಕ್ಕೂ ಉತ್ತಮವಾಗಿದೆ. ಜಂಜಾಟದ ಜೀವನದ ನಡುವೆ ಕೆಲ ಸಮಯ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಜೀವನೋತ್ಸಾಹವನ್ನು ಹೆಚ್ಚಿಸಿಕೊಳ್ಳಬಹುದಾಗಿದೆ' ಎಂದರು.

ADVERTISEMENT

ಕಪುಚಿನ್ ಕೃಷಿಕ ಸೇವಾ ಕೇಂದ್ರದ ನಿರ್ದೇಶಕ ಫಾ.ಎಡ್ವಿನ್ ರಾಕೇಶ್ ಡಿಸೋಜ ಮಾತನಾಡಿ, ‘ಇಂತಹ ಕಾರ್ಯಕ್ರಮಗಳ ಮೂಲಕ ಪ್ರಕೃತಿಯ ನಡುವೆ ಸಮಯ ಕಳೆಯಲು ಸಾಧ್ಯ. ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿಸಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಿದೆ’ ಎಂದರು.

ಮಹಿಳೆಯರಿಗೆ ಮತ್ತು ಮಕ್ಕಳಿಗೆ ಹಗ್ಗಜಗ್ಗಾಟ, ಕೆಸರು ಗದ್ದೆ ಓಟ, ಕೊಡಪಾನ ನಡಿಗೆ ಮುಂತಾದ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ವಿಮುಕ್ತಿ ಸ್ವಸಹಾಯ ಸಂಘಗಳ ಒಕ್ಕೂಟದ ಯಶೋದಾ, ಫಾ.ಪ್ರಕಾಶ್, ವಿಂಧ್ಯಾ ಯೊಗೀಶ್, ಜಯಶ್ರೀ, ಗ್ರಾ.ಪಂ. ಸದಸ್ಯೆ ಆತಿಕಾ ಭಾನು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.