ಚಿಕ್ಕಮಗಳೂರು: ಹಾಪ್ಕಾಮ್ಸ್ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಕೆ.ಎಚ್.ಕುಮಾರಸ್ವಾಮಿ, ಉಪಾಧ್ಯಕ್ಷರಾಗಿ ಎನ್.ಪಿ.ರವಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ತೋಟಗಾರಿಕೆ ಇಲಾಖೆ ಕಚೇರಿ ಸಭಾಂಗಣದಲ್ಲಿ ಈಚೆಗೆ ಚುನಾವಣೆ ನಡೆದಿತ್ತು. ಹಾಮ್ಕಾಮ್ಸ್ ಜಿಲ್ಲಾ ಘಟಕದ ನಿರ್ದೇಶಕರು ಅವಿರೋಧ ವಾಗಿ ಆಯ್ಕೆ ಮಾಡಿದರು. ಚುನಾವ ಣಾಧಿಕಾರಿಯಾಗಿ ಪೃಥ್ವಿಜಿತ್ ಕಾರ್ಯ ನಿರ್ವಹಿಸಿದರು.
ನೂತನ ಅಧ್ಯಕ್ಷ ಕೆ.ಎಚ್ ಕುಮಾರಸ್ವಾಮಿ ಮಾತನಾಡಿ, ‘ಹಾಪ್ ಕಾಮ್ಸ್ಗಳನ್ನು ಜನ ಸ್ನೇಹಿಯಾಗಿಸಲು ಶ್ರಮಿಸಲಾಗುವುದು’ ಎಂದರು.
ಉಪಾಧ್ಯಕ್ಷ ಎನ್.ಕೆ ರವಿ, ನಿರ್ದೇಶಕರಾದ ಎ.ಎನ್ ಮಹೇಶ್, ರಾಮಚಂದ್ರಪ್ಪ, ಡಿ.ಬಿ.ಪ್ರಕಾಶ್, ಬಿ.ನಾಗಭೂಷಣ್, ಕೆ.ಸಿ.ನಾರಾಯಣ್, ಶಶಿಕಲಾ, ಮೋಹನ್ಕುಮಾರಿ, ಮಲ್ಲೇಶಯ್ಯ, ಜಯಮ್ಮ, ರಾಮಚಂದ್ರಪ್ಪ ಎಸ್.ಬಿ. ಆನಂದ, ಸಹಾಯಕ ಚುನಾವ ಣಾಧಿಕಾರಿ ಎಂ.ಡಿ ಲೋಹಿತ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.