ADVERTISEMENT

ಅಯ್ಯನಕೆರೆ, ಮದಗದ ಕೆರೆಗಳಿಗೆ ಬಾಗಿನ ಸಮರ್ಪಣೆ

​ಪ್ರಜಾವಾಣಿ ವಾರ್ತೆ
Published 26 ಜುಲೈ 2022, 6:21 IST
Last Updated 26 ಜುಲೈ 2022, 6:21 IST
ಕಡೂರು ತಾಲ್ಲೂಕಿನ ಅಯ್ಯನಕೆರೆ ಜೇಸಿಐ ಸ್ವರ್ಣಶ್ರೀ ಸದಸ್ಯರು ಸೋಮವಾರ ಬಾಗಿನ ಸಮರ್ಪಿಸಿದರು.
ಕಡೂರು ತಾಲ್ಲೂಕಿನ ಅಯ್ಯನಕೆರೆ ಜೇಸಿಐ ಸ್ವರ್ಣಶ್ರೀ ಸದಸ್ಯರು ಸೋಮವಾರ ಬಾಗಿನ ಸಮರ್ಪಿಸಿದರು.   

ಕಡೂರು: ತಾಲ್ಲೂಕಿನ ಅಯ್ಯನಕೆರೆ ಮತ್ತು ಮದಗದ ಕೆರೆಗೆ ಸೋಮವಾರ ಕಡೂರು ಜೇಸಿಐ ಸ್ವರ್ಣಶ್ರೀ ವತಿಯಿಂದ ಬಾಗಿನ ಸಮರ್ಪಿಸಲಾಯಿತು.

ಜೇಸಿಐ ಘಟಕದ ಅಧ್ಯಕ್ಷೆ ಮಮತಾ ಮುಕುಂದ ರಾವ್ ಮಾತನಾಡಿ, ‘ಜೀವನಕ್ಕೆ ಅತ್ಯವಶ್ಯಕವಾದ ಜೀವಜಲ ಪೂರೈಸುವ ಜಲಮೂಲಗಳಿಗೆ ಗ್ರಾಮೀಣ ರೈತರು ಗೌರವ ಸಮರ್ಪಣೆ ಮಾಡುವ ನಿಟ್ಟಿನಲ್ಲಿ ಮುತ್ತೈದೆಯರಿಂದ ಬಾಗಿನ ಸಮರ್ಪಿಸುತ್ತಿದ್ದರು. ನಮ್ಮ ನೆಲದ ಸಂಸ್ಕೃತಿ ಮತ್ತು ಗ್ರಾಮೀಣ ಪರಂಪರೆಯನ್ನು ಉಳಿಸುವ ನಿಟ್ಟಿನಲ್ಲಿ ತಾಲ್ಲೂಕಿನ ರೈತರ ಪರವಾಗಿ ಎರಡೂ ಕೆರೆಗಳಿಗೆ ಬಾಗಿನ ಸಮರ್ಪಿಸಲಾಗಿದೆ’ ಎಂದರು.

ಸ್ವರ್ಣಶ್ರೀ ಕಾರ್ಯದರ್ಶಿ ಶ್ವೇತಾ ಹರೀಶ್, ಖಜಾಂಚಿ ಕವಿತಾ ಶ್ರೀನಿವಾಸ್, ಸದಸ್ಯರಾದ ಗಿರಿಜಮ್ಮ ಬಸಪ್ಪ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.