ಕಡೂರು: ತಾಲ್ಲೂಕಿನ ಗುಣಸಾಗರ ಗ್ರಾಮದಲ್ಲಿ ಕೊಟ್ಟಿಗೆ ಕುಸಿದು ಎರಡು ಹಸುಗಳು ಮೃತಪಟ್ಟಿವೆ.
ಇತ್ತೀಚೆಗೆ ಮಳೆ ಹೆಚ್ಚಾಗಿ, ಸುಮಿತ್ರಾಬಾಯಿ ಮಂಜಾ ನಾಯ್ಕ ಎಂಬುವರಿಗೆ ಸೇರಿದ ಕೊಟ್ಟಿಗೆಯಲ್ಲಿ ನೀರು ಉಕ್ಕುತ್ತಿತ್ತು. ಇದರಿಂದ ಕೊಟ್ಟಿಗೆಯ ಮಣ್ಣಿನ ಗೋಡೆಗಳು ದುರ್ಬಲಗೊಂಡು, ಗುರುವಾರ ಬೆಳಿಗ್ಗೆ ಕುಸಿದಿದೆ. ಕೊಟ್ಟಿಗೆಯ ಮಾಡು ಒಳಗಿದ್ದ ಹಸುಗಳ ಮೇಲೆ ಬಿದ್ದು ಎರಡು ಹಸುಗಳು ಸ್ಥಳದಲ್ಲಿಯೇ ಮೃತಪಟ್ಟಿವೆ. ಮತ್ತೊಂದು ಹಸುವಿಗೆ ಕೋಡು ಮುರಿದು ಗಾಯವಾಗಿದೆ. ಸ್ಥಳಕ್ಕೆ ಕಂದಾಯ ಇಲಾಖೆಯ ಜಿತೇಂದ್ರ ಸಿಂಗ್ ನಾಯಕ್ ಭೇಟಿ ನೀಡಿ ಪರಿಶೀಲಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.