ADVERTISEMENT

ಕೊಟ್ಟಿಗೆ ಕುಸಿತ: ಎರಡು ಹಸು ಸಾವು

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2022, 5:03 IST
Last Updated 16 ಸೆಪ್ಟೆಂಬರ್ 2022, 5:03 IST
ತಾಲ್ಲೂಕಿನ ಗುಣಸಾಗರದಲ್ಲಿ ಕೊಟ್ಟಿಗೆ ಕುಸಿದು ಎರಡು ಹಸುಗಳು ಮೃತಪಟ್ಟಿವೆ.ಕುಸಿದು ಬಿದ್ದ ಕೊಟ್ಟಿಗೆಯ ನೋಟ
ತಾಲ್ಲೂಕಿನ ಗುಣಸಾಗರದಲ್ಲಿ ಕೊಟ್ಟಿಗೆ ಕುಸಿದು ಎರಡು ಹಸುಗಳು ಮೃತಪಟ್ಟಿವೆ.ಕುಸಿದು ಬಿದ್ದ ಕೊಟ್ಟಿಗೆಯ ನೋಟ   

ಕಡೂರು: ತಾಲ್ಲೂಕಿನ ಗುಣಸಾಗರ ಗ್ರಾಮದಲ್ಲಿ ಕೊಟ್ಟಿಗೆ ಕುಸಿದು ಎರಡು ಹಸುಗಳು ಮೃತಪಟ್ಟಿವೆ.

ಇತ್ತೀಚೆಗೆ ಮಳೆ ಹೆಚ್ಚಾಗಿ, ಸುಮಿತ್ರಾಬಾಯಿ ಮಂಜಾ ನಾಯ್ಕ ಎಂಬುವರಿಗೆ ಸೇರಿದ ಕೊಟ್ಟಿಗೆಯಲ್ಲಿ ನೀರು ಉಕ್ಕುತ್ತಿತ್ತು. ಇದರಿಂದ ಕೊಟ್ಟಿಗೆಯ ಮಣ್ಣಿನ ಗೋಡೆಗಳು ದುರ್ಬಲಗೊಂಡು, ಗುರುವಾರ ಬೆಳಿಗ್ಗೆ ಕುಸಿದಿದೆ. ಕೊಟ್ಟಿಗೆಯ ಮಾಡು ಒಳಗಿದ್ದ ಹಸುಗಳ ಮೇಲೆ ಬಿದ್ದು ಎರಡು ಹಸುಗಳು ಸ್ಥಳದಲ್ಲಿಯೇ ಮೃತಪಟ್ಟಿವೆ. ಮತ್ತೊಂದು‌ ಹಸುವಿಗೆ ಕೋಡು ಮುರಿದು ಗಾಯವಾಗಿದೆ. ಸ್ಥಳಕ್ಕೆ ಕಂದಾಯ ಇಲಾಖೆಯ ಜಿತೇಂದ್ರ ಸಿಂಗ್ ನಾಯಕ್ ಭೇಟಿ ನೀಡಿ ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT