ಕಳಸ: ಕಳಸ- ಸಂಸೆ ರಸ್ತೆಯ ಶ್ರೀರಾಮ ಎಸ್ಟೇಟ್ ಬಳಿ ರಸ್ತೆಗೆ ಬಿದ್ದ ಮಣ್ಣು ಮತ್ತು ಮರ ತೆರವು ಮಾಡದೆ ಇರುವುದರಿಂದ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗಿದೆ.
10 ದಿನದ ಹಿಂದೆ ರಸ್ತೆ ಬದಿ ಸಣ್ಣ ಪ್ರಮಾಣದ ಭೂಕುಸಿತ ಉಂಟಾಗಿ ಕಲ್ಲು ಮತ್ತು ಮಣ್ಣು ರಸ್ತೆಗೆ ಬಿದ್ದಿದೆ. ವಾರದ ಹಿಂದೆ ಅಲ್ಲಿಗೆ ಸಮೀಪದಲ್ಲೇ ಮರವೊಂದು ರಸ್ತೆಗೆ ಬಿದ್ದಿದೆ.
ಈ ಮಣ್ಣು ಮತ್ತು ಮರವನ್ನು ಈವರೆಗೆ ತೆರವು ಮಾಡಿಲ್ಲ. ಇದರಿಂದ ವಾಹನಗಳ ಸಂಚಾರಕ್ಕೆ ತೊಡಕು ಉಂಟಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.