ನರಸಿಂಹರಾಜಪುರ: ಪಟ್ಟಣದ ಸಂತೆ ಮಾರುಕಟ್ಟೆಗೆ ಪಟ್ಟಣ ಪಂಚಾಯಿತಿಯಿಂದ ಪುನಿತ್ ರಾಜ್ಕುಮಾರ್ ಹೆಸರನ್ನಿಟ್ಟು, ಡಾ.ಪುನಿತ್ ರಾಜಕುಮಾರ್ ಸಂತೆ ಮಾರುಕಟ್ಟೆ ಎಂದು ನಾಮಫಲಕ ಅಳವಡಿಸಲಾಗಿತ್ತು.
ಸದರಿ ನಾಮಫಲಕ ಶಿಥಿಲವಾಗಿತ್ತು. ಈ ಬಗ್ಗೆ ‘ಪ್ರಜಾವಾಣಿ’ಯ ಕುಂದುಕೊರತೆ ವಿಭಾಗದಲ್ಲಿ ನಾಮಫಲಕ ದುರಸ್ತಿಪಡಿಸಿ ಎಂಬ ಶೀರ್ಷಿಕೆಯಡಿ ಸುದ್ದಿ ಪ್ರಕಟವಾಗಿತ್ತು. ಈ ನಿಟ್ಟಿನಲ್ಲಿ ಪ.ಪಂ. ಶಿಥಿಲಗೊಂಡ ನಾಮಫಲಕ ತೆರವುಗೊಳಿಸಿ, ಭಾನುವಾರ ಹೊಸ ನಾಮಫಲಕ ಅಳವಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.