ADVERTISEMENT

ನರಸಿಂಹರಾಜಪುರ: ಮರದ ಕೊಂಬೆ ಬಿದ್ದು ಕಾರ್ಮಿಕ ಸಾವು

​ಪ್ರಜಾವಾಣಿ ವಾರ್ತೆ
Published 3 ಜುಲೈ 2022, 1:55 IST
Last Updated 3 ಜುಲೈ 2022, 1:55 IST

ನರಸಿಂಹರಾಜಪುರ: ತೋಟದಲ್ಲಿ ಕೆಲಸ ಮಾಡುವಾಗ ಮರದ ಕೊಂಬೆ ಬಿದ್ದು ಕಾರ್ಮಿಕರೊಬ್ಬರು ಶನಿವಾರ ಮೃತಪಟ್ಟಿದ್ದಾರೆ.

ಕೊಪ್ಪ ತಾಲ್ಲೂಕಿನ ನಿವಾಸಿ ಫ್ರಾಸ್ಸಿಸ್ (55) ಮೃತರು. ಅವರು ಶೆಟ್ಟಿಕೊಪ್ಪದ ಭದ್ರಾ ಕಾಲೊನಿಯ ಮಹೇಶ್ ಭಂಡಾರಿ ಎಂಬುವರ ತೋಟದಲ್ಲಿ ಶನಿವಾರ ಕೆಲಸ ಮಾಡುತ್ತಿದ್ದರು. ಗಾಳಿ ಮಳೆಗೆ ಸಿಲ್ವರ್ ಮರವು ರಬ್ಬರ್ ಮರದ ಮೇಲೆ ಬಿದ್ದಿದ್ದು, ಈ ವೇಳೆ ರಬ್ಬರ್ ಮರದ ಕೊಂಬೆ ಫ್ರಾಸ್ಸಿಸ್ ಅವರ ತಲೆ ಮೇಲೆ ಬಿದ್ದಿದೆ. ತೀವ್ರವಾಗಿ ಗಾಯಗೊಂಡ ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT