ADVERTISEMENT

ಚಿಕ್ಕಮಗಳೂರು | ಮುಂದುವರಿದ ಮಳೆ, ರಸ್ತೆಗೆ ಉರುಳಿದ ಮರ, ಗದ್ದೆಗಳು ಜಲಾವೃತ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2020, 3:41 IST
Last Updated 7 ಆಗಸ್ಟ್ 2020, 3:41 IST
ಬಾಳೆಹೊನ್ನೂರು ಬಳಿಯ ಹೆಗ್ಗದ್ದೆ ಸಮೀಪ ಮರವೊಂದು ರಸ್ತೆಗೆ ಅಡ್ಡಲಾಗಿ ಉರುಳಿದೆ.
ಬಾಳೆಹೊನ್ನೂರು ಬಳಿಯ ಹೆಗ್ಗದ್ದೆ ಸಮೀಪ ಮರವೊಂದು ರಸ್ತೆಗೆ ಅಡ್ಡಲಾಗಿ ಉರುಳಿದೆ.    
""

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮಳೆ ಮತ್ತು ಗಾಳಿ ಮುಂದುವರಿದಿದೆ.ಬಾಳೆಹೊನ್ನೂರು ಬಳಿಯಹೆಗ್ಗದ್ದೆ ಸಮೀಪ ಮರವೊಂದು ರಸ್ತೆಗೆ ಅಡ್ಡಲಾಗಿ ಉರುಳಿದೆ. ಕೊಪ್ಪ ತಾಲ್ಲೂಕಿನ ಬಿಜೆಕಟ್ಟೆ ಬಳಿ ತೋಟ, ಗದ್ದೆಗಳು ಜಲಾವೃತವಾಗಿವೆ.

ಕೊಪ್ಪ ತಾಲ್ಲೂಕಿನ ನಾರ್ವೆ ಬಳಿ ತುಂಗಾ ನದಿ ನೀರು ರಸ್ತೆಗೆ ಹೊರಳಿದ್ದು ಕೊಪ್ಪ- ಜಯಪುರ ಮಾರ್ಗದಲ್ಲಿ ಸಂಚಾರಕ್ಕೆ ಅಡಚಣೆಯಾಗಿದೆ. ಆರ್ಡಿಕೊಪ್ಪ ಭಾಗದಲ್ಲಿ ಗದ್ದೆ, ತೋಟಗಳಿಗೆ ನೀರು ನುಗ್ಗಿದೆ.

ಶೃಂಗೇರಿಯಲ್ಲಿ ಕುರುಬಗೇರಿ, ಭಾರತೀ ತೀರ್ಥ ರಸ್ತೆಗಳು ಜಲಾವೃತವಾಗಿವೆ. ಶೃಂಗೇರಿ- ಮಂಗಳೂರು ಹೆದ್ದಾರಿಯಲ್ಲಿ ಸಂಚಾರಕ್ಕೆ ಅಡಚಣೆಯಾಗಿದೆ.ಚಿಕ್ಕಮಗಳೂರು ತಾಲ್ಲೂಕಿನ ಅರೇನೂರು ಗ್ರಾಮದ ತೋಟಗಳಲ್ಲಿ ನೀರು ನುಗ್ಗಿದೆ. ಮಲೆನಾಡು ಭಾಗದ ಹಲವೆಡೆ ವಿದ್ಯುತ್ ಪೂರೈಕೆ ಕಡಿತವಾಗಿದೆ.

ADVERTISEMENT
ಕೊಪ್ಪ ತಾಲ್ಲೂಕಿನ ಬಿಜೆಕಟ್ಟೆ ಬಳಿ ತೋಟ, ಗದ್ದೆಗಳು ಜಲಾವೃತವಾಗಿವೆ.

(ಇನ್ನಷ್ಟು ಮಾಹಿತಿ ಶೀಘ್ರ ಅಪ್‌ಡೇಟ್ ಆಗಲಿದೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.