ADVERTISEMENT

ಮಳೆಗಾಳಿ: 42 ಮನೆ, 78 ವಿದ್ಯುತ್‌ ಕಂಬ ಹಾನಿ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2022, 4:12 IST
Last Updated 11 ಆಗಸ್ಟ್ 2022, 4:12 IST

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮಳೆಗಾಳಿಗೆ ಬುಧವಾರ 42 ಮನೆಗಳು ಕುಸಿದಿವೆ. 78 ವಿದ್ಯುತ್‌ ಕಂಬಗಳು ಮುರಿದಿವೆ.

ಸುಮಾರು 3.5 ಕಿ.ಮೀ ರಸ್ತೆ , ನಾಲ್ಕು ಸೇತುವೆಗಳು ಹಾಳಾಗಿವೆ. 1.56 ಕಿ.ಮೀ ವಿದ್ಯುತ್‌ ಮಾರ್ಗದ ತಂತಿ ಹಾಳಾಗಿದೆ.

ಚಿಕ್ಕಮಗಳೂರು ತಾಲ್ಲೂಕಿನಲ್ಲಿ 9 ಮನೆಗಳು ಹಾನಿಯಾಗಿವೆ. ಕಲ್ದೊಡ್ಡಿಯ ಯಶೋಧಾ, ಮುಗುಳವಳ್ಳಿಯ ದೊಡ್ಡಯ್ಯ, ತಗಡೂರಿನ ಜ್ಯೋತಿ, ಹವ್ವಳ್ಳಿಯ ವಿಶ್ವನಾಥ್‌, ಕಾಳಮ್ಮ, ಕೆಳಗೂರಿನ ಉಮೇಶ, ಹಾಂದಿಯ ಉದ್ದಯ್ಯ, ಅಪ್ಪು ಮೇಸ್ತ್ರಿ, ಮಲ್ಲಂದೂರಿನ ಮಂಜುನಾಥ ಅವರ ಮನೆಗಳು ಹಾನಿಯಾಗಿವೆ.

ADVERTISEMENT

ಕೊಟ್ಟಿಗೆಹಾರ– 9.8, ಕಮ್ಮರಡಿ– 9, ಬಿಳ್ಳೂರು– 7.9, ಹೊಸಕೆರೆ– 6.7, ಕೆರೆಕಟ್ಟೆ– 6.4, ಕಿಗ್ಗಾ– 6.2, ಹಿರೇಬೈಲು– 6,ಜಾವಳಿ– 5.8, ಕಳಸ– 5.7ಗೋಣಿಬೀಡು, ಶೃಂಗೇರಿ– 5.6 ಜಯಪುರ– 5.2, ಮೂಡಿಗೆರೆ– 4.7, ಮೇಗರಮಕ್ಕಿ– 3.9 ಸೆಂ.ಮೀ ಮಳೆಯಾಗಿದೆ.

ಜಿಲ್ಲೆಯಲ್ಲಿ ಜೂನ್‌ 1ರಿಂದ ಈವರೆಗೆ 666 ಮನೆಗಳು, 23 ಗುಡಿಸಲು ಹಾನಿಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.