ADVERTISEMENT

ಚಿಕ್ಕಮಗಳೂರು: ಸಾಧಾರಣ ಮಳೆ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2020, 13:39 IST
Last Updated 6 ಏಪ್ರಿಲ್ 2020, 13:39 IST
ಚಿಕ್ಕಮಗಳೂರಿನ ಹನುಮಂತಪ್ಪ ವೃತ್ತದಲ್ಲಿ ಸೋಮವಾರ ಮಳೆಯಲ್ಲಿ ನೆನೆದುಕೊಂಡು ಮಹಿಳೆಯರಿಬ್ಬರು ಸಾಗಿದರು. ಪ್ರಜಾವಾಣಿ ಚಿತ್ರ
ಚಿಕ್ಕಮಗಳೂರಿನ ಹನುಮಂತಪ್ಪ ವೃತ್ತದಲ್ಲಿ ಸೋಮವಾರ ಮಳೆಯಲ್ಲಿ ನೆನೆದುಕೊಂಡು ಮಹಿಳೆಯರಿಬ್ಬರು ಸಾಗಿದರು. ಪ್ರಜಾವಾಣಿ ಚಿತ್ರ   

ಚಿಕ್ಕಮಗಳೂರು: ನಗರ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಸೋಮವಾರ ಮಳೆಯಾಯಿತು,ಇಳೆಗೆ ತಂಪೆರೆಯಿತು.

ಮಧ್ಯಾಹ್ನ 2.30ರ ಹೊತ್ತಿಗೆ ಮಳೆ ಶುರುವಾಯಿತು. ಮಿಂಚುಗುಡುಗಿನ ಆರ್ಭಟ ಇತ್ತು. ಆರಂಭದಲ್ಲಿ 10 ನಿಮಿಷ ಬಿರುಸಾಗಿ, ನಂತರ ನಿಧಾನಗತಿಯಲ್ಲಿ ಸುರಿಯಿತು. ಸುಮಾರು ಒಂದು ಗಂಟೆ ಸಾಧಾರಣ ಮಳೆಯಾಯಿತು.

ಅಲ್ಲಂಪುರ, ಗಿರಿಶ್ರೇಣಿ ಇತರೆಡೆಗಳಲ್ಲಿ ಮಳೆಯಾಗಿದೆ. ಮಳೆ ಶುರುವಾಗಿರುವುದು ರೈತರಲ್ಲಿ ಹರ್ಷ ಮೂಡಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.