ಅಜ್ಜಂಪುರ: ‘ನಾನು ಎಸ್ಟಿ ಮೀಸಲಾತಿಯ ವಿರೋಧಿಯಲ್ಲ. ಈಗಿರುವ ಎಸ್ಟಿ ಮೀಸಲಾತಿಯನ್ನು ಶೇ 25ಕ್ಕೆ ಏರಿಸಬೇಕು. ಅದರಲ್ಲಿ ಕುರುಬರಿಗೆ ಶೇ 7.5 ನಿಗದಿಗೊಳಿಸಬೇಕು ಎಂಬುದು ನನ್ನ ಆಶಯ’ ಎಂದು ವಿಧಾನಸಭೆವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ತಾಲ್ಲೂಕಿನ ಚೌಳಹಿರಿಯೂರು ಗ್ರಾಮದಲ್ಲಿ ಗುರುವಾರ ನಡೆದ ಕನಕ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಕುಲಶಾಸ್ತ್ರ ಅಧ್ಯಯನ ನಡೆ
ಯುತ್ತಿದೆ. ಅದು ಪೂರ್ಣಗೊಂಡ ಬಳಿಕ ಎಸ್ಟಿ ಮೀಸಲಾತಿಗೆ ಆಗ್ರಹಿಸೋಣ ಎಂದಿದ್ದೇನೆ’ ಎಂದರು.
‘ಪ್ರಧಾನಮಂತ್ರಿ ಆದರೂ, ಸಾಮಾಜಿಕ ನ್ಯಾಯ ಬಿಟ್ಟು ರಾಜಕೀವಾಗಿ ಒಂದು ತೀರ್ಮಾನವನ್ನೂ ಮಾಡಲ್ಲ’ ಎಂದರು. ‘ವಯಸ್ಸಾದ, ಬರಡು ರಾಸು
ಗಳನ್ನು ಮಾರಾಟ ಮಾಡಬೇಡಿ, ಕೊಲ್ಲ
ಬೇಡಿ ಎಂದರೆ, ಅವುಗಳನ್ನು ಸಾಕುವವ
ರಾರು? ಈ ಬಗ್ಗೆ ಮಾತನಾಡಿದರೆ ಸಿದ್ದರಾಮಯ್ಯ ಗೋಮಾತೆ ವಿರೋಧಿ ಎನ್ನುತ್ತಾರೆ. ಆದರೆ, ನಮ್ಮ ಮನೆಯಲ್ಲೂ ಸಂಕ್ರಾಂತಿಯಂದು ಗೋಪೂಜೆ ಮಾಡುತ್ತೇವೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.