ಶೃಂಗೇರಿ: ಚಿಕ್ಕಮಗಳೂರಿನಲ್ಲಿ ನಡೆದ ಜಿಲ್ಲಾ ಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಶೃಂಗೇರಿಯ ಬಿ.ಜಿ.ಎಸ್ ವಿಜ್ಞಾನ ಹಾಗೂ ವಾಣಿಜ್ಯ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳು ವಿಜೇತರಾಗಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಬಾಲಕರ ಟೆನ್ನಿಕಾಯಿಟ್ನಲ್ಲಿ ಕೆ.ಸಿ.ವಿಕಾಸ್ ನಾಯಕ್, ಎಸ್.ವೈ ಗಮನ, ಕೆ.ಬಿ ದೃಪದ್ದೇವ್, ಬಿ.ಪಿ ಕಿಶೋರ್ ಮತ್ತು ಬಾಲಕಿಯರ ಟೆನ್ನಿಕಾಯಿಟ್ನಲ್ಲಿ ಬಿ.ಜಿ ಹರಿಣಿ, ಎಚ್.ಜೆ. ಪದವಿ, ಎಸ್.ಸಿ. ನಂದಿನಿ, ಕೆ.ಎಸ್. ಹರ್ಷಿತಾ, ಸೃಷ್ಟಿ ಭಟ್ ಹಾಗೂ ಬಾಲಕರ ಜೂಡೊ ಆಟದಲ್ಲಿ ಪ್ರತೀಕ್ ಎಂ.ಕೆ. ಮತ್ತು ರಕ್ಷಿತ್ ಎಸ್.ಆರ್. ಪ್ರಥಮ ಸ್ಥಾನ ಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಬಾಲಕರ ಟೆಕ್ವಾಂಡೊ ಸ್ಪರ್ಧೆಯಲ್ಲಿ ಪ್ರತೀಕ್ ಎಂ.ಕೆ. ಮತ್ತು ರಕ್ಷಿತ್ ಎಸ್.ಆರ್. ದ್ವಿತೀಯ ಸ್ಥಾನ, ಹ್ಯಾಮರ್ ಥ್ರೋನಲ್ಲಿ ಶ್ರೀಕಾಂತ್ ಗೌಡ ತೃತೀಯ ಸ್ಥಾನ, ಬಾಲಕಿಯರ ರಿದಮಿಕ್ ಯೋಗದಲ್ಲಿ ಇಂಪಾ ಎಚ್.ಎಚ್. ದ್ವಿತೀಯ ಸ್ಥಾನ ಮತ್ತು ದೃಶ್ಯ ಡಿ.ಗೌಡ ತೃತೀಯ ಸ್ಥಾನ ಗಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.